Advertisement

ಹಾವೇರಿ: 214 ಕೋವಿಡ್ ಹೊಸ ಪ್ರಕರಣ; 107 ಜನರು ಗುಣಮುಖ

07:56 PM Sep 13, 2020 | Mithun PG |

ಹಾವೇರಿ: ಜಿಲ್ಲೆಯಲ್ಲಿ ಇಂದು 214 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6772 ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಸೋಂಕಿಗೆ ಒಟ್ಟು 130 ಜನರು ಬಲಿಯಾದಂತಾಗಿದೆ. ಇಂದು ಒಂದೇ ದಿನದಲ್ಲಿ ಕೋವಿಡ್ 19 ಸೋಂಕಿನಿಂದ 107 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆ ಮೂಲಕ ಒಟ್ಟು 4904 ಜನರು ಚೇತರಿಸಿಕೊಂಡಿದ್ದಾರೆ,

ಇನ್ನೂ ಒಟ್ಟು 1,738 ಸಕ್ರಿಯ ಕೋವಿಡ್ 19 ಪ್ರಕರಣಗಳು ಜಿಲ್ಲೆಯಲ್ಲಿವೆ.

ವಿಜಯಪುರ  ಜಿಲ್ಲೆಯಲ್ಲಿ 29 ಜನರಿಗೆ ಸೋಂಕು ದೃಢ-ಓರ್ವ ಸಾವು

ವಿಜಯಪುರದಲ್ಲಿ ಭಾನುವಾರ ಮತ್ತೆ 29 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸೋಂಕಿತರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲಾಡಳಿತ ಮಾಧ್ಯಮಗಳಿಗೆ ಬಿಡುಗಡೆ ಆಗಿರುವ ಕೋವಿಡ್-19 ಆರೋಗ್ಯ ವರದಿಯಲ್ಲಿ ಜಿಲ್ಲೆಯಲ್ಲಿ ಮತ್ತೆ 29 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 7749 ಕ್ಕೆ ಏರಿಕೆಯಾಗಿದೆ.

Advertisement

ಒಬ್ಬರು ಮೃತಪಟ್ಟ ಕಾರಣ ಸೋಂಕಿತ ಮೃತರ ಸಂಖ್ಯೆ 134 ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸೋಂಕು ರೋಗದಿಂದ ಗುಣಮುಖರಾಗಿ ಮತ್ತೆ 84 ಜನರು ಮನೆಗೆ ಮರಳಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 7039 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಕೋವಿಡ್ ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಹೋಂ ಐಸೋಲೇಶನ್ ಸೇರಿ 576 ಜನರು ಮಾತ್ರ ಸಕ್ರೀಯ ರೋಗಿಗಳಾಗಿ ಆರೋಗ್ಯ ಸೇವಾ ನಿಗಾದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next