Advertisement

“ರೋಹಿಂಗ್ಯಾ ವಲಸಿಗರಿಗೆ ಫ್ಲ್ಯಾಟ್‌ ಕೊಡಲು ನಿರ್ದೇಶಿಸಿಲ್ಲ’

09:11 PM Aug 17, 2022 | Team Udayavani |

ನವದೆಹಲಿ: ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್‌ಗಳನ್ನು ಕೊಡುವುದಕ್ಕೆ ದೆಹಲಿ ಸರ್ಕಾರಕ್ಕೆ ನಿರ್ದೇಶಿಸಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ಸ್ಪಷ್ಟನೆ ನೀಡಿದೆ.

Advertisement

ರೋಹಿಂಗ್ಯಾ ಮುಸ್ಲಿಮರನ್ನು ದೆಹಲಿಯ ಬಕ್ಕಾರವಾಲಾದಲ್ಲಿರುವ ಫ್ಲ್ಯಾಟ್‌ಗಳಿಗೆ ಸ್ಥಳಾಂತರಿಸಲಾಗುವುದು ಎನ್ನುವ ಸುದ್ದಿಗಳು ಪ್ರಕಟವಾದ ಬೆನ್ನಲ್ಲೇ ಸಚಿವಾಲಯ ಈ ಸ್ಪಷ್ಟನೆ ಕೊಟ್ಟಿದೆ.

“ರೋಹಿಂಗ್ಯಾ ಅಕ್ರಮ ವಿದೇಶಿಗರನ್ನು ಗಡಿಪಾರು ಮಾಡುವವರೆಗೆ ಅವರನ್ನು ಬಂಧನ ಕೇಂದ್ರಗಳಲ್ಲೇ ಇರಿಸಬೇಕು. ಈಗ ಅವರು ವಾಸವಿರುವ ಸ್ಥಳವನ್ನೇ ಬಂಧನ ಕೇಂದ್ರ ಎಂದು ಕರೆಯುವುದಕ್ಕೆ ದೆಹಲಿ ಸರ್ಕಾರಕ್ಕೆ ಸೂಚಿಸಲಾಗಿದೆ.

ದೆಹಲಿ ಸರ್ಕಾರವು ರೋಹಿಂಗ್ಯಾ ವಲಸಿಗರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಸ್ತಾಪವನ್ನು ಕೇಂದ್ರದೆದುರು ಮಾಡಿದ್ದು, ಅದನ್ನು ಕೇಂದ್ರ ತಳ್ಳಿ ಹಾಕಿದೆ. ಈಗಾಗಲೇ ಅವರ ಗಡಿಪಾರು ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆ ಅವರನ್ನು ಸ್ಥಳಾಂತರ ಮಾಡದಂತೆ ತಿಳಿಸಲಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆಯಲ್ಲಿ ತಿಳಿಸಿದೆ.

ರೋಹಿಂಗ್ಯಾ ದೇಶದ ಭದ್ರತೆಗೆ ಆಪತ್ತು:
ರೋಹಿಂಗ್ಯಾ ವಲಸಿಗರು ದೇಶದ ಭದ್ರತೆಗೇ ಬೆದರಿಕೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ಹೇಳಿದ್ದಾರೆ. “ರೊಹಿಂಗ್ಯಾ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಕೇಜ್ರಿವಾಲ್‌ ಸರ್ಕಾರ ರಾಷ್ಟ್ರೀಯ ಭದ್ರತೆಯನ್ನು ಬದಿಗಿಟ್ಟು ಇಂತಹ ಹೊಸಲು ರಾಜಕೀಯ ಮಾಡಲು ಹೊರಟಿತ್ತು. ಜನರ ದಾರಿ ತಪ್ಪಿಸಲು ಯತ್ನಿಸಿದೆ’ ಎಂದು ಅವರು ಬುಧವಾರ ಸುದ್ದಿಗೋಷ್ಟಿಯಲ್ಲಿ ದೂರಿದ್ದಾರೆ.

Advertisement

ರೋಹಿಂಗ್ಯಾ ವಲಸಿಗರನ್ನು ಫ್ಲ್ಯಾಟ್‌ಗಳಿಗೆ ಸ್ಥಳಾಂತರಿಸಲಾಗುವುದು, ಪೊಲೀಸ್‌ ಭದ್ರತೆ ನೀಡಲಾಗುವುದು ಎನ್ನುವ ಟ್ವೀಟ್‌ ಅನ್ನು ಬಿಜೆಪಿ ನಾಯಕ ಹದೀìಪ್‌ ಸಿಂಗ್‌ ಪುರಿ ಮಾಡಿದ್ದು, ಅನೇಕ ಊಹಾಪೋಹಗಳಿಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next