Advertisement

‘ಮಾಡಬಾರದ್ದನ್ನು ಮಾಡಿದ್ದಕ್ಕೆ ನನಗೇ ನಾಚಿಕೆಯಾಗುತ್ತಿದೆ’: ನತಾಶ ಡೆತ್ ನೋಟ್ ನಲ್ಲೇನಿದೆ?

09:55 AM Jan 24, 2020 | Hari Prasad |

ದೆಹಲಿ: ಅಟ್ಲಾಸ್ ಸೈಕಲ್ ಕಂಪೆನಿಯ ಮಾಲಕ ಸಂಜಯ್ ಕಪೂರ್ ಅವರ ಪತ್ನಿ ನತಾಶಾ ಕಪೂರ್ ಮಂಗಳವಾರದಂದು ದೆಹಲಿಯ ಔರಂಗಜೇಬ್ ಲೇನ್ ನಲ್ಲಿರುವ ತಮ್ಮ ಬಂಗಲೆಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದರು ಮತ್ತು ಹೀಗೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ‘ಡೆತ್ ನೋಟ್’ ಒಂದನ್ನೂ ಸಹ ಬರೆದಿಟ್ಟಿದ್ದರು.

Advertisement

ನತಾಶಾ ಅವರ ಡೆತ್ ನೋಟ್ ನಲ್ಲಿ ಅವರು ಬರೆದುಕೊಂಡಿರುವ ಕೆಲವು ವಿಚಾರಗಳು ಅವರ ಆತ್ಮಹತ್ಯೆಗೆ ಅವರಲ್ಲಿ ಉಂಟಾಗಿದ್ದ ಪಾಪಪ್ರಜ್ಞೆಯೇ ಕಾರಣವಾಗಿತ್ತೇ ಎಂಬ ಸಂಶಯ ಮೂಡುವಂತೆ ಮಾಡಿದೆ.

57 ವರ್ಷದ ನತಾಶಾ ಅವರು ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದರು ಹಾಗೂ ಮನೆಯವರೆಲ್ಲರೂ ಚೆನ್ನಾಗಿರಬೇಕೆಂದು ಡೆತ್ ನೋಟ್ ನಲ್ಲಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

ಆದರೆ ಆ ಡೆತ್ ನೋಟ್ ನಲ್ಲಿ ನತಾಶಾ ಅವರು ಬರೆದಿರುವ ಒಂದು ಅಂಶ ಮಾತ್ರ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ‘ನನ್ನ ಜೀವನವನ್ನು ನಾನೇ ಕೊನೆಗೊಳಿಸುತ್ತಿದ್ದೇನೆ. ಬೇರೆ ಯಾರೂ ಇದಕ್ಕೆ ಜವಾಬ್ದಾರರಲ್ಲ. ಮಾಡಬಾರದಾಗಿದ್ದ ಕೆಲಸವೊಂದನ್ನು ನಾನು ಮಾಡಿದ್ದೇನೆ. ನನ್ನ ಕುರಿತಾಗಿ ನನಗೇ ನಾಚಿಕೆಯುಂಟಾಗುತ್ತಿದೆ. ನಿಮ್ಮೆಲ್ಲರನ್ನೂ ನಾನು ಪ್ರೀತಿಸುತ್ತೇನೆ, ಸಂಜಯ್, ನನ್ನ ಮಗಳು ಮತ್ತು ನನ್ನ ಮಗನನ್ನು ನಾನು ತುಂಬಾ ಪ್ರೀತಿಸುತ್ತೇನೆ, ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂಬ ವಿಚಾರಗಳು ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ.

‘ಮಾಡಬಾರದ ಕೆಲಸ ಮಾಡಿರುವುದಕ್ಕೆ ನನ್ನ ಕುರಿತಾಗಿಯೇ ನನಗೆ ನಾಚಿಕೆಯುಂಟಾಗುತ್ತಿದೆ ಎಂದು ನತಾಶಾ ಅವರು ಬರೆದುಕೊಂಡಿರುವುದು, ಅವರನ್ನು ಯಾವುದೋ ಒಂದು ತಪ್ಪು ಬಹುವಾಗಿ ಕಾಡುತ್ತಿತ್ತು ಮತ್ತು ಆ ನೋವಿನಿಂದ ಹೊರಬರಲಾರದೆ ಅವರು ಆತ್ಮಹತ್ಯೆಗೆ ಒಳಗಾಗುವ ನಿರ್ಧಾರಕ್ಕೆ ಬಂದಿರಬಹುದೆಂಬ ವಾದವೊಂದು ಅವರ ಆಪ್ತವಲಯದಲ್ಲಿ ಇದೀಗ ಕೇಳಿಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next