Advertisement

ಕೋವಿಡ್ 19: ಕನ್ನಡ ಚಿತ್ರರಂಗಕ್ಕೆ ಶಿವರಾಜ್‌ ಕುಮಾರ್‌ನಾಯಕ

09:53 AM Jul 25, 2020 | Hari Prasad |

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಶಿವರಾಜ್‌ ಕುಮಾರ್‌ ಅವರನ್ನು ನಾಯಕರನ್ನಾಗಿ ಆರಿಸಲಾಗಿದೆ.

Advertisement

ಶುಕ್ರವಾರ ಕನ್ನಡ ಚಿತ್ರರಂಗದ ಎಲ್ಲ ಅಂಗಸಂಸ್ಥೆಗಳು ಒಟ್ಟಾಗಿ ಶಿವರಾಜ್‌ ಕುಮಾರ್‌ ಅವರ ನಿವಾಸಕ್ಕೆ ತೆರಳಿ ಸಭೆ ನಡೆಸಿ, ಈ ಘೋಷಣೆ ಮಾಡಿದೆ.

ಕೋವಿಡ್ 19ನಿಂದಾಗಿ ಚಿತ್ರರಂಗದಲ್ಲಾಗುವ ಸಮಸ್ಯೆ ಬಗೆಹರಿಸಲು ಬಿಕ್ಕಟ್ಟು ನಿರ್ವಹಣೆಗೆ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌, ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್‌, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ಛಾಯಾಗ್ರಾಹಕ ಸಂಘದ ಅಧ್ಯಕ್ಷ ಜೆಜೆ ಕೃಷ್ಣ, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ನಟ ಸಾಧುಕೋಕಿಲ, ಸಂಗೀತ ನಿರ್ದೇಶಕ ಗುರುಕಿರಣ್‌, ನಿರ್ಮಾಪಕರಾದ ಎ. ಗಣೇಶ್‌, ಜಯಣ್ಣ ಭೋಗೇಂದ್ರ, ಎಂ. ಜಿ. ರಾಮಮೂರ್ತಿ, ಕೆ. ಪಿ. ಶ್ರೀಕಾಂತ್‌, ಸೂರಪ್ಪ ಬಾಬು, ಸಾ. ರಾ. ಗೋವಿಂದು. ಕೆ. ಮಂಜು. ಎನ್‌. ಎಂ. ಸುರೇಶ್‌, ಭಾ. ಮಾ. ಹರೀಶ್‌ ಸಹಿತ ಅನೇಕರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next