Advertisement

Hassan: ಮದುವೆಗೆ ನಿರಾಕರಿಸಿದ ಶಿಕ್ಷಕಿ ಅಪಹರಣ!

11:12 PM Nov 30, 2023 | Team Udayavani |

ಹಾಸನ: ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಖಾಸಗಿ ಶಾಲಾ ಶಿಕ್ಷಕಿಯಾಗಿರುವ ಅರ್ಪಿತಾ ಅವರನ್ನು ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿ ಅಪಹರಿಸಿ ರುವ ಪ್ರಕರಣ ನಗರದ ಹೊರ ವಲಯದ ಬಿಟ್ಟಗೌಡನಹಳ್ಳಿ ಬಳಿ ಬೆಳಗ್ಗೆ ನಡೆದಿದೆ.

Advertisement

ಅರ್ಪಿತಾ ಅವರ ಹತ್ತಿರದ ಸಂಬಂಧಿಯಾಗಿರುವ ರಾಮು ಎಂಬಾತ ಇತ್ತೀಚೆಗೆ ತನ್ನ ಪೋಷಕರನ್ನು ಕರೆದುಕೊಂಡು ಅರ್ಪಿತಾ ಮನೆಗೆ ಹೋಗಿ ಮದುವೆ ಪ್ರಸ್ತಾವ ಇರಿಸಿದ್ದು, ಯುವತಿ ಹಾಗೂ ಮನೆಯವರು ನಿರಾಕರಿಸಿದ್ದರು. ಇದರಿಂದ ಕೆರಳಿದ ರಾಮು ಕೆಲವರೊಂದಿಗೆ ಸೇರಿ ಶಿಕ್ಷಕಿಯನ್ನು ಇನ್ನೋವಾ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದು, ಈ ದೃಶ್ಯ ಸಮೀಪದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಎಸ್ಪಿ ಮೊಹಮ್ಮದ್‌ ಸುಜೀತಾ ಹಾಗೂ ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವತಿಯನ್ನು ಮಡಿಕೇರಿ ಕಡೆಗೆ ಕೊಂಡೊಯ್ದಿರುವ ಹೋಗಿರುವ ಶಂಕೆ ವ್ಯಕ್ತವಾಗಿದೆ. ಮೂರು ತನಿಖಾ ತಂಡಗಳು ಅಪಹರಣಕಾರರ ಪತ್ತೆಯಲ್ಲಿ ತೊಡಗಿವೆ.

Advertisement

Udayavani is now on Telegram. Click here to join our channel and stay updated with the latest news.

Next