Advertisement

ಇಂದಿನಿಂದ ಹಾಸನಾಂಬಾ ಜಾತ್ರಾ ಮಹೋತ್ಸವ

06:45 AM Oct 12, 2017 | Team Udayavani |

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ಜಾತ್ರಾ ಮಹೋತ್ಸವ ಇಂದಿನಿಂದ ಅ. 21 ರವರೆಗೆ ನಡೆಯಲಿದೆ. ಗುರುವಾರ ಮಧ್ಯಾಹ್ನ 12.30ಕ್ಕೆ ದೇಗುಲ ದ್ವಾರ ತೆರೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. 

Advertisement

ಭಕ್ತರ ಸರತಿ ನಿಲ್ಲುವ ಹಾಗೂ ವಿಶೇಷ ದರ್ಶನದ ಸರತಿ ಸಾಗುವ ಹೊಸಲೈನ್‌ ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಮಳೆಯಿಂದ ರಕ್ಷಣೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿವ ನೀರು ಸೇರಿದಂತೆ ಮೂಲಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಅಲ್ಲದೆ ತುರ್ತು ಪರಿಸ್ಥಿತಿ ನಿರ್ವಹಿಸಲು ವೈದ್ಯ ಚಿಕಿತ್ಸೆಯ ವ್ಯವಸ್ಥೆಯೂ ಇದೆ.

ದೇವಿಯ ದರ್ಶನಕ್ಕೆ ಒಟ್ಟು 8 ದಿನಗಳು ಮಾತ್ರ ಅವಕಾಶವಿದ್ದು, ಗರ್ಭಗುಡಿಯ ಸ್ವತ್ಛತೆ ಹಾಗೂ ದೇವಿಗೆ ನೈವೇದ್ಯ ಅರ್ಪಿಸುವ ಸುಮಾರು 2 ಗಂಟೆ ಹೊರತುಪಡಿಸಿ ದಿನದ 22 ಗಂಟೆಗಳ ಕಾಲ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಭಕ್ತರ ವಾಹನಗಳ ನಿಲುಗಡೆಗೆ ಸಂತೆಪೇಟೆಯ ಗೊರೂರ ರಸ್ತೆಯ ಬದಿ ಹಾಗೂ ಕಸ ಸಂಸ್ಕರಣೆಯ ಘಟಕದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

ತ್ವರಿತ ನೇರ ದರ್ಶನಕ್ಕೆ 1000 ರೂ. ಮತ್ತು ವಿಶೇಷ ದರ್ಶನಕ್ಕೆ 300 ರೂ. ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಜಿಲ್ಲಾ  ಹೆಚ್ಚುವರಿ ಎಸ್ಪಿವಿ.ಎಂ.ಜ್ಯೋತಿ ನೇತೃತ್ವದಲ್ಲಿ 400 ಪೊಲೀಸ್‌ ಸಿಬ್ಬಂದಿ ಹಾಗೂ 100 ಮಂದಿ ಗೃಹ ರಕ್ಷಕರನ್ನು  ಬಂದೋಬಸ್ತ್ ಮಾಡಲಾಗಿದೆ. ಮೂವರು ಡಿವೈಎಸ್ಪಿ$ಗಳು ಮೂರು ಶಿಪ್ಟ್ಗಳಲ್ಲಿ ಭದ್ರತೆಯ ಮೇಲುಸ್ತುವಾರಿ ವಹಿಸುವರು. ಜೊತೆಗೆ 12 ಸಿಸಿ ಕ್ಯಾಮೆರಾಗಳ ರಕ್ಷಣೆಯೂ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next