Advertisement

ಎಚ್‌.ಡಿ.ರೇವಣ್ಣ ದುರ್ವರ್ತನೆ: ಆರೋಪ

07:35 PM May 31, 2021 | Team Udayavani |

ಸಕಲೇಶಪುರ: ಶುದ್ಧ ಕುಡಿಯುವ ನೀರನ್ನು ಕೇಳಿದಕ್ಕೆ ಅಲ್ಪಸಂಖ್ಯಾತ ಜನಾಂಗದಸಮಾಜ ಸೇವಕನೋರ್ವನಿಗೆ ಮಾಜಿ ಸಚಿವ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ರೇವಣ್ಣ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯಎಂದು ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್‌ ಸಂಗಿ ಹೇಳಿದರು.

Advertisement

ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹಲವಾರುವರ್ಷಗಳಿಂದ ಪುರಸಭೆಯಲ್ಲಿ ಜೆಡಿಎಸ್‌ ಪಕ್ಷವೇ ಅಧಿಕಾರ ನಡೆಸುತ್ತಿದ್ದು, ಜೊತೆಗೆಕಳೆದ 13 ವರ್ಷಗಳಿಂದಲೂ ಶಾಸಕರಾಗಿ ಎಚ್‌.ಕೆ.ಕುಮಾರಸ್ವಾಮಿ ತಾಲೂಕಿನಲ್ಲಿಸೇವೆ ಸಲ್ಲಿಸುತ್ತಿದ್ದರೂ ಸಹ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ನೀಡಲುವಿಫ‌ಲರಾಗಿದ್ದಾರೆ.

ಕೊರೊನಾದಂತಹ ಮಾರಕ ರೋಗ ತಾಂಡವಾಡುತ್ತಿರುವಸಮಯದಲ್ಲಿ ಪಟ್ಟಣದ ಜನ ಅಶುದ್ಧ ನೀರು ಕುಡಿಯಬೇಕಾಗಿರುವುದುದುರಂತವಾಗಿದೆ. ಈ ಕುರಿತು ರೇವಣ್ಣ ಅವರಲ್ಲಿ ಇದ್ರೀಸ್‌ ಎಂಬ ಯುವಕ ಕೇಳಿದಕ್ಕೆದುರ್ವರ್ತನೆ ತೋರಿದ್ದಾರೆಂದು ದೂರಿದರು.

ಸಕಲೇಶಪುರ ಕ್ಷೇತ್ರದ ಬಗ್ಗೆಅವರಿಗೂ ಕಿಂಚತ್ತು ಕಾಳಜಿಯಿಲ್ಲ. ಸುಮ್ಮನೆ ಅದು ಕೊಟ್ಟಿದ್ದೇವೆ, ಇದು ಕೊಟ್ಟಿದ್ದೇವೆಎಂದು ಹೇಳುತ್ತಿದ್ದಾರೆ ಎಂದರು. ತಾ.ಪಂ ಮಾಜಿ ಸದಸ್ಯ ಸಿಮೆಂಟ್‌ ಮಂಜುನಾಥ್‌ಮಾತನಾಡಿದರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್‌, ನಗರಅಧ್ಯಕ್ಷ ಉಮೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next