Advertisement

ಕಾಫಿ ತೋಟದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷ

09:17 PM Jul 19, 2021 | Team Udayavani |

ಸಕಲೇಶಪುರ: ಹೆತ್ತೂರು ಹೋಬಳಿಯ ಬ್ಯಾಗಡಹಳ್ಳಿಯಲ್ಲಿಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿತಾರಣ್ಯಕ್ಕೆಭಾನುವಾರ ಬಿಡಲಾಯಿತು. ಪಶ್ಚಿಮಘಟ್ಟ ತಪ್ಪಲಿನ ಗ್ರಾಮದರೈತ ಆಕಾಶ ರವರ ಕಾಫಿ ತೋಟದಲ್ಲಿ ಕಾಳಿಂಗ ಸರ್ಪ ಕಾಣಿಸಿಕೂಂಡಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Advertisement

ಅಧಿಕಾರಿಗಳು ಸೋಮವಾರಪೇಟೆ ಉರಗ ಪ್ರೇಮಿ ಸ್ನೇಕ್‌ರಘು, ಜಾನಿ ಸುಮಾರು 3 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ 12 ಅಡ್ಡಿ ಉದ್ದದ ಹಾಗೂ 9 ಕೆ.ಜಿ.ತೂಕವಿದ್ದಕಾಳಿಂಗ ಸರ್ಪವನ್ನು ಹಿಡಿದು ಬಿಸಲೆ ರಕ್ಷಿತಾರಣ್ಯಕ್ಕೆ ಬಿಡಲಾಯಿತು. ಕಾರ್ಯಚರಣೆಯಲ್ಲಿ ಅರಣ್ಯ ರಕ್ಷಕ ನವೀನ್‌ಕುಮಾರ್‌, ಸಿಬ್ಬಂದಿಗಳಾದ ಆಕಾಶ, ಜೀವನ್‌, ಅಕಿಲ…,ಅಭಿಷೇಕ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next