Advertisement

ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ಜೋಷಿಗೆ ಬಿಜೆಪಿ ತಾಕೀತು ?

09:21 AM Mar 29, 2019 | Team Udayavani |

ಹೊಸದಿಲ್ಲಿ : ಬಿಜೆಪಿಯ ಹಿರಿಯ ನಾಯಕರಲ್ಲಿ ಓರ್ವರಾಗಿರುವ ಮುರಲೀ ಮನೋಹರ ಜೋಷಿ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಭಾರತೀಯ ಜನತಾ ಪಕ್ಷ ತಾಕೀತು ಮಾಡಿದೆಯೇ ? ಇಂತಹ ಒಂದು ಗುಮಾನಿ ಹುಟ್ಟಿಸುವ ಪತ್ರವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

Advertisement

2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಹಲವಾರು ಪಟ್ಟಿಗಳನ್ನು ಭಾರತೀಯ ಜನತಾ ಪಕ್ಷ ಈ ವರೆಗೆ ಬಿಡುಗಡೆ ಮಾಡಿದ್ದು ಅವುಗಳಲ್ಲಿ ಪಕ್ಷದ ಇಬ್ಬರು ಹಿರಿಯ ನಾಯಕರಾಗಿರುವ ಲಾಲಕೃಷ್ಣ ಆಡ್ವಾಣಿ ಮತ್ತು ಮುರಲೀ ಮನೋಹರ್‌ ಜೋಷಿ ಅವರ ಹೆಸರನ್ನು ಕೈಬಿಡಲಾಗಿರುವುದು ಸ್ಪಷ್ಟವಾಗಿದೆ. ಆಡ್ವಾಣಿ ಅವರ ಗುಜರಾತ್‌ನ ಗಾಂಧಿನಗರ ಕ್ಷೇತ್ರವನ್ನು ಈ ಬಾರಿ ಅಮಿತ್‌ ಶಾ ಈಗಾಗಲೇ ವಶಪಡಿಸಿಕೊಂಡಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಎಂ ಎಂ ಜೋಷಿ ಅವರು ತಮ್ಮ ವಾರಾಣಸಿ ಕ್ಷೇತ್ರವನ್ನು ನರೇಂದ್ರ ಮೋದಿ ಅವರಿಗೆ ಬಿಟ್ಟುಕೊಟ್ಟು ತಾನು ಉತ್ತರ ಪ್ರದೇಶದ ಕಾನ್ಪುರ ಕ್ಷೇತ್ರದಿಂದ ಸ್ಪರ್ಧಿಸಿ ಭಾರೀ ಬಹುಮತದೊಂದಿಗೆ ಗೆದ್ದಿದ್ದರು.

ಈ ಬಾರಿ ಕಾನ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರನ್ನು ಪಕ್ಷ ಈ ತನಕ ಪ್ರಕಟಿಸಿಲ್ಲ. ಈ ನಡುವೆ ಅಂತರ್‌ ಜಾಲದಲ್ಲಿ ಎಂ ಎಂ ಜೋಷಿ ಅವರ ಹೆಸರಿರುವ ಪತ್ರವೊಂದು ವೈರಲ್‌ ಆಗಿದೆ. ಈ ಪತ್ರವನ್ನು ಜೋಷಿ ಅವರ ಹೆಸರಲ್ಲಿ ಕಾನ್ಪುರದ ಜನರನ್ನು ಉದ್ದೇಶಿಸಿ ಬರೆಯಲಾಗಿರುವುದು ಕಂಡು ಬರುತ್ತದೆ.

ಪತ್ರದ ಹೂರಣ ಹೀಗಿದೆ : “ಕಾನ್ಪುರದ ಪ್ರಿಯ ಮತದಾರರೇ, ಬಿಜೆಪಿಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಶ್ರೀ ರಾಮಲಾಲ್‌ ಅವರು ನಾನು (ಜೋಶಿ) ಕಾನ್ಪುರದಿಂದಾಗಲೀ ಬೇರೆ ಎಲ್ಲಿಂದಾದರೂ ಆಗಲೀ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಕೂಡದೆಂದು ನನಗೆ ತಿಳಿಸಿದ್ದಾರೆ’.

Advertisement

ಜೋಷಿ ಹೆಸರಲ್ಲಿರುವ ಈ ಪತ್ರದ ಸಾಚಾತನವನ್ನು ದೃಢೀಕರಿಸಲಾಗಿಲ್ಲ. ಆದರೆ ಪತ್ರವಂತೂ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದು ಕಾನ್ಪುರದ ಜನತೆ ತಮ್ಮ ಅಭ್ಯರ್ಥಿ ಯಾರೆಂಬುದನ್ನು ತಿಳಿಯಲು ಕಾತರರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next