Advertisement

Haryana: ವಿವಿಧ ನೇಮಕಾತಿಯಲ್ಲಿ ಅಗ್ನಿವೀರರಿಗೆ 10% ಮೀಸಲು: ಹರಿಯಾಣ ಘೋಷಣೆ

04:33 PM Jul 18, 2024 | Team Udayavani |

ಚಂಡೀಗಢ: “ಅಗ್ನಿಪಥ ಯೋಜನೆ’ಯ ಕುರಿತು ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಹರಿಯಾಣ ರಾಜ್ಯ ಸರಕಾರವು, ಕಾನ್‌ಸ್ಟೆಬಲ್‌, ಅರಣ್ಯ ಸಂರಕ್ಷಕರು, ಜೈಲ್‌ ವಾರ್ಡನ್‌ಗಳ ನೇಮಕಾತಿಯಲ್ಲಿ ಶೇ.10 ಮೀಸಲಾತಿಯನ್ನು ಅಗ್ನಿವೀರ ರಿಗೆ ನೀಡಲು ಮುಂದಾಗಿದೆ. ಈ ವರ್ಷದ ಅಕ್ಟೋಬರ್‌- ನವೆಂಬರ್‌ನಲ್ಲಿ ಹರಿಯಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ಕಾರಣಕ್ಕಾಗಿಯೇ ಈ ಮೀಸಲಾತಿಯನ್ನು ಪ್ರಕಟಿಸಿದೆ ಎಂದು ವಿಶ್ಲೇಷಿಸ ಲಾಗುತ್ತಿದೆ.

Advertisement

ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರು, “ಒಂದು ವೇಳೆ ಅಗ್ನಿವೀರರು ತಮ್ಮ ಸ್ವಂತ ಉದ್ಯೋಗ ಆರಂಭಿಸಲು ಮುಂದಾದರೆ ಅವರಿಗೆ ಬಡ್ಡಿರಹಿತವಾಗಿ 5 ಲಕ್ಷ ರೂ. ಸಾಲವನ್ನು ಸರಕಾರ ಒದಗಿಸಲಿದೆ” ಎಂದು ಹೇಳಿದರು.

ಕಾನ್‌ಸ್ಟೆಬಲ್‌, ಮೈನಿಂಗ್‌ ಗಾರ್ಡ್‌, ಅರಣ್ಯ ಸಂರಕ್ಷಕರು, ಜೈಲ್‌ ವಾರ್ಡನ್‌ ಮತ್ತು ವಿಶೇಷ ಪೊಲೀಸ್‌ ಅಧಿಕಾರಿಗಳ ನೇರ ನೇಮಕಾತಿ ವೇಳೆ ಅಗ್ನಿವೀರರಿಗೆ ಶೇ.10 ಮೀಸಲಾತಿಯನ್ನು ನೀಡಲಾಗುವುದು. ಹಾಗೆಯೇ, ಗ್ರೂಪ್‌ ಸಿ ಮತ್ತು ಡಿ ನೇಮಕಾತಿ ಸಂಬಂಧ ವಯೋಮಾನ ಸಡಿಲಿಕೆಯನ್ನು ನೀಡಲಾಗುವುದು. ಹಾಗಿದ್ದೂ ಅಗ್ನಿವೀರರ ಮೊದಲ ಬ್ಯಾಚಿನ ವಯೋಮಾನ ಸಡಿಲಿಕೆ 5 ವರ್ಷಗಳವರೆಗೆ ಇರಲಿದೆ. ಜತೆಗೆ ಶೇ.5ರಷ್ಟು ಮೀಸಲಾತಿಯೂ ಸಿಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಅಗ್ನಿವೀರರನ್ನು ನೇಮಕ ಮಾಡುವ ಕೈಗಾರಿಕೆಗೆ ಸಬ್ಸಿಡಿ
ಯಾವ ಕೈಗಾರಿಕೆಯು ಅಗ್ನಿವೀರರನ್ನು ತಿಂಗಳಿಗೆ 30 ಸಾವಿರ ಸಂಬಳಕ್ಕೆ ನೇಮಕ ಮಾಡಿಕೊಳ್ಳುತ್ತದೆಯೋ ಅಂಥ ಕೈಗಾರಿಕೆಗೆ ವಾರ್ಷಿಕ 60 ಸಾವಿರ ಸಬ್ಸಿಡಿ ನೀಡಲಾಗು ವುದು. ಜತೆಗೆ ಅಗ್ನಿವೀರರಿಗೆ ಆದ್ಯತೆ ಮೇರೆಗೆ ಶಸ್ತ್ರಾಸ್ತ್ರ ಹೊಂದಲು ಅನುಮತಿ ಕೊಡ ಲಾಗುವುದು ಎಂದು ಸೈನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next