Advertisement

ಹರಿಯಾಣ ಗ್ಯಾಂಗ್‌ ರೇಪ್‌ ಗೆ ನಿರುದ್ಯೋಗ ಕಾರಣ: ಬಿಜೆಪಿ ಶಾಸಕಿ ವಿವಾದ

04:24 PM Sep 15, 2018 | udayavani editorial |

ಚಂಡೀಗಢ : ಹರಿಯಾಣದ ಮಹೇಂದ್ರಗಢದ ಕನೈನಾದಲ್ಲಿ 19ರ ಹರೆಯದ ತರುಣಿಯನ್ನು ಅಪಹರಿಸಿ ಆಕೆಯ ಮೇಲೆ ಗ್ಯಾಂಗ್‌ ರೇಪ್‌ ನಡೆದಿರುವುದಕ್ಕೆ ಯುವ ಜನರಲ್ಲಿ ಉದ್ಯೋಗವಿಲ್ಲದ ಹತಾಶೆಯೇ ಕಾರಣ ಮತ್ತು ಈ ಹತಾಶೆಯಿಂದಲೇ ಅವರು ಲೈಂಗಿಕ ಅಪರಾಧ ಎಸಗುವಂತಾಗಿದೆ ಎಂದು ಬಿಜೆಪಿ ನಾಯಕಿ ಪ್ರೇಮಲತಾ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

Advertisement

ಹರಿಯಾಣದ ಉಚನಾ ಕಲಾನ್‌ ಕ್ಷೇತ್ರದ ಶಾಸಕಿಯಾಗಿರುವ ಪ್ರೇಮಲತಾ ಅವರು ನಿರುದ್ಯೋಗಿ ಯುಕವರು ಹತಾಶೆಯಿಂದ ಈ ರೀತಿಯ ಲೈಂಗಿಕ ಅಪರಾಧಗಳಿಗೆ ಮುಂದಾಗುತ್ತಿದ್ದಾರೆ ಎಂದು ಹೇಳಿರುವುದು ಸರಕಾರಕ್ಕೆ ಇರಿಸು ಮುರಿಸು ಉಂಟು ಮಾಡಿದೆ.  

ಈ ನಡುವೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಅಪರಾಧಿಗಳನ್ನು ಹಿಡಿಯುವಲ್ಲಿ ಸೂಕ್ತ ಮಾಹಿತಿ, ಸುಳಿವು ನೀಡುವವರಿಗೆ ಒಂದು ಲಕ್ಷ ರೂ. ಇನಾಮು ಕೊಡಲಾಗುವುದೆಂದು ಘೋಷಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next