Advertisement

ವಿಶ್ವಾಸ ದ್ರೋಹ ಆರೋಪ; ನಾವು ಕಾಂಗ್ರೆಸ್ ಹೆಸರಿನಲ್ಲಿ ಮತಯಾಚಿಸಿಲ್ಲ; ಚೌಟಾಲ ತಿರುಗೇಟು

09:46 AM Oct 29, 2019 | Team Udayavani |

ಸಿರ್ಸಾ: ಜನನಾಯಕ್ ಜನತಾ ಪಕ್ಷದ (ಜೆಜೆಪಿ) ನಾಯಕ ದುಶ್ಯಂತ್ ಪಟೇಲ್ ಮತದಾರರ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದು, ನಾವು ಬಿಜೆಪಿ ಅಥವಾ ಕಾಂಗ್ರೆಸ್ ಹೆಸರಿನಲ್ಲಿ ಮತಯಾಚಿಸಿಲ್ಲ. ರಾಜ್ಯದಲ್ಲಿ ಸುಭದ್ರ ಸರ್ಕಾರ ರಚಿಸಬೇಕು ಎಂಬ ನಿಟ್ಟಿನಲ್ಲಿ ಜೆಜೆಪಿ ಬೆಂಬಲ ನೀಡಲು ನಿರ್ಧರಿಸಿತ್ತು ಎಂದು ದುಶ್ಯಂತ್ ಪಟೇಲ್ ತಿಳಿಸಿದ್ದಾರೆ.

Advertisement

ಮತ ಯಾರಿಗೋ, ಬೆಂಬಲ ಇನ್ಯಾರಿಗೋ ಎಂದು ಹೇಳುವವರ ಬಳಿ ಕೇಳುತ್ತೇನೆ, ನಾವು ನಿಮ್ಮ ಹೆಸರಿನಲ್ಲಿ ಮತ ಯಾಚಿಸಬೇಕಿತ್ತಾ? ಎಂದು ಹರ್ಯಾಣ ಉಪಮುಖ್ಯಮಂತ್ರಿ ಚೌಟಾಲ ಅವರು ಕಾಂಗ್ರೆಸ್ ಹಿರಿಯ ಮುಖಂಡ ಭುಪೇಂದ್ರ ಸಿಂಗ್ ಹೂಡಾ ಆರೋಪಕ್ಕೆ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹರ್ಯಾಣದಲ್ಲಿ ಜೆಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸುವ ಕಾಂಗ್ರೆಸ್ ಮಾತುಕತೆ ವಿಫಲವಾದ ನಂತರ ಕಾಂಗ್ರೆಸ್ ಮುಖಂಡ ಹೂಡಾ ಅವರು ಜೆಜೆಪಿ ಬಿಜೆಪಿ ಮೈತ್ರಿ ಬಗ್ಗೆ ಅಪವಿತ್ರ ಮೈತ್ರಿ ಎಂದು ಆರೋಪಿಸಿದ್ದರು.

ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಸರ್ಕಾರ ರಚಿಸುವುದಾಗಿ ಘೋಷಿಸಿದ ನಂತರ ಹೂಡಾ ಅವರು ಜೆಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ವಿಧಾನಸಭೆ ಫಲಿತಾಂಶ ಹೊರಬಿದ್ದಿತ್ತು. 90 ವಿಧಾನಸಭಾ ಬಲ ಹೊಂದಿರುವ ಹರ್ಯಾಣದಲ್ಲಿ ಸರ್ಕಾರ ರಚಿಸಲು 46ಸ್ಥಾನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ (41) ಹಾಗೂ ಜೆಜೆಪಿ (10) ಮೈತ್ರಿಯೊಂದಿಗೆ ಸರ್ಕಾರ ರಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next