Advertisement

ಹರಿಯಾಣ: ಸ್ಪರ್ಧೆಗೆ ಕೈ ನಾಯಕರ ಹಿಂದೇಟು

01:05 AM Mar 22, 2019 | Team Udayavani |

ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಈಗ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹಿರಿಯ ಕಾಂಗ್ರೆಸ್‌ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗೆ ಜಿಂದ್‌ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಾಗ ಕಾಂಗ್ರೆಸ್‌ ಹೀನಾಯವಾಗಿ ಸೋಲುಂಡಿದ್ದರಿಂದ, ಪಕ್ಷದಲ್ಲಿ ಚುನಾವಣೆ ಎದುರಿಸುವ ಬಗ್ಗೆಯೇ ವಿಶ್ವಾಸ ಹೊರಟು ಹೋಗಿದೆ. ಅಷ್ಟೇ ಅಲ್ಲ, ರಾಜ್ಯ ಘಟಕ ದಲ್ಲಿ ಒಳಜಗಳ ತಾರಕಕ್ಕೇರಿದ್ದು, ಇದನ್ನು ಸರಿಪಡಿ ಸುವ ಕೇಂದ್ರ ನಾಯಕತ್ವದ ಎಲ್ಲ ಪ್ರಯತ್ನ ಗಳೂ ವಿಫ‌ಲವಾಗಿವೆ. ಕೆಲವೇ ದಿನಗಳ ಹಿಂದೆ ದಿಲ್ಲಿ ಯಲ್ಲಿ ನಡೆದ ಸಭೆ ಈ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಚುನಾವಣಾ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯಲ್ಲಿ ಸ್ಥಾನ ನೀಡದ್ದರ ಬಗ್ಗೆಯೂ ಆಕ್ಷೇಪ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮಾಸಾಂತ್ಯದಲ್ಲಿ ಬಸ್‌ ಯಾತ್ರೆಯನ್ನು ಹಮ್ಮಿಕೊಳ್ಳು ವಂತೆ ರಾಜ್ಯ ನಾಯಕರಿಗೆ ಸೂಚಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next