Advertisement

ಹೆಸರಿಗಷೇ ಹಾರೋಹಳ್ಳಿ ತಾಲೂಕು ರಚನೆ

03:22 PM Sep 22, 2019 | Suhan S |

ರಾಮನಗರ: 2019 ಫೆಬ್ರವರಿ 8, ಅಂದಿನ ಸಿಎಂ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಕನಕಪುರ ತಾಲೂಕಿನ ಹೋಬಳಿ ಹಾರೋಹಳ್ಳಿಯನ್ನು ನೂತನ ತಾಲೂಕಾಗಿ ರಚಿಸಲು ನಿರ್ಧರಿಸಲಾಗಿತ್ತು. ಜಿಲ್ಲಾಡಳಿತದಿಂದ ವರದಿ ತರಿಸಿಕೊಂಡು ತಿಂಗಳುಗಳೇ ಉರುಳಿವೆ. ನೂತನ ತಾಲೂಕು ರಚನೆ ಬಗ್ಗೆ ಸರ್ಕಾರ ಇನ್ನಷ್ಟೇ ಗಮನಹರಿಸಬೇಕಾಗಿದೆ.

Advertisement

2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ, ಕನಕಪುರ, ಚನ್ನಪಟ್ಟಣ ಮತ್ತು ಮಾಗಡಿ ತಾಲೂಕುಗಳನ್ನು ಬೇರ್ಪಡಿಸಿ ರಾಮನಗರ ಜಿಲ್ಲೆಯ ರಚನೆಗೆ ಕಾರಣವಾಗಿದ್ದರು. 2018ರಲ್ಲಿ ಮತ್ತೆ ಸಿಎಂ ಪಟ್ಟ ಅಲಂಕರಿಸಿದ ಕುಮಾರ ಸ್ವಾಮಿ, ಕನಕಪುರ ತಾಲೂಕಿನ ಹೋಬಳಿ ಹಾರೋಹಳ್ಳಿ ಯನ್ನು ಹೊಸ ತಾಲೂಕು ರಚಿಸಲು ಮುನ್ನುಡಿ ಬರೆದಿದ್ದಾರೆ.

ಫೆ.8ರಂದು ಹೊಸ ತಾಲೂಕು ರಚನೆಗೆ ತೀರ್ಮಾನ: ಫೆಬ್ರವರಿ 8ರಂದು ಹೊಸ ತಾಲೂಕು ರಚನೆಗೆ ನಿರ್ಧರಿಸಿದ ನಂತರ ಫೆಬ್ರವರಿ 28 ಮತ್ತು ಮಾರ್ಚ್‌ 5ರಂದು ಸರ್ಕಾರ ಹೊರಡಿಸಿರುವ ಸೂಚನೆಯಗಳನ್ವಯ ರಾಮನಗರ ಉಪವಿಭಾಗದ ಉಪವಿಭಾಗಾಧಿಕಾರಿಗಳು ವರದಿ ನೀಡಿದ್ದಾರೆ. ಜುಲೈ 5ರಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಕೆ.ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳಾಗಿವೆ. ಸದರಿ ಸಭೆಯ ನಡಾವಳಿಗಳು ಮತ್ತು ಉಪವಿಭಾಗಾಧಿಕಾರಿಗಳು ನೀಡಿರುವ ವರದಿ ಕ್ರೂಢೀಕರಿಸಿ ಜಿಲ್ಲಾಧಿಕಾರಿಗಳು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂ ಮಾಪನ) ಇವರಿಗೆ ನೂತನ ತಾಲೂಕಿಗೆ ಸೇರ್ಪಡೆಗೊಳ್ಳುವ ಹೋಬಳಿ ಮತ್ತು ಗ್ರಾಮಗಳ ವಿವರಗಳನ್ನು ಸಲ್ಲಿಸಲಾಗಿದೆ.

ಜಿಲ್ಲಾಧಿಕಾರಿಗಳ ಪತ್ರವನ್ನು ಆಧರಿಸಿ, ನೂತನ ತಾಲೂಕು ರಚನೆಗೆ ಸರ್ಕಾರ ಇನ್ನಷ್ಟೇ ಕ್ರಮವಹಿಸಬೇಕಾಗಿದೆ. ನೂತನ ತಾಲೂಕು ರಚನೆ ಸಂಬಂಧ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ.

ನೂತನ ತಾಲೂಕಿನಲ್ಲಿ ಯಾವ್ಯಾವ ಹಳ್ಳಿಗಳ ಸೇರ್ಪಡೆ: ಕನಕಪುರ ತಾಲೂಕಿನಲ್ಲಿ ಹಾಲಿ 81 ಕಂದಾಯ ವೃತ್ತಗಳಿವೆ. ಈ ಪೈಕಿ 26 ವೃತ್ತಗಳನ್ನು ಕನಕಪುರ ತಾಲೂಕಿನಿಂದ ಬೇರ್ಪಡಿಸಿ ನೂತನ ಹಾರೋಹಳ್ಳಿ ತಾಲೂಕನ್ನು ಸೃಜಿಸುವುದಾಗಿ ರಾಜ್ಯ ಸರ್ಕಾರ ಗೆಜೆಟ್‌ ಹೊರೆಡಿಸಿದೆ. ಹಾರೋಹಳ್ಳಿ, ಗಬ್ಟಾಡಿ, ಕಗ್ಗಲಹಳ್ಳಿ, ಕಾಡು ಜಕ್ಕಸಂದ್ರ, ಕೋನಸಂದ್ರ, ಬನ್ನಿಕುಪ್ಪೆ, ಮೇಡಮಾರನಹಳ್ಳಿ, ಕೊಲ್ಲಿಗನಹಳ್ಳಿ, ಪಿಚ್ಚನಕೆರೆ, ಚಿಕ್ಕಕಬ್ಟಾಳು, ದೊಡ್ಡಮುದುವಾಡಿ, ಚಿಕ್ಕಮರಳವಾಡಿ, ತೇರುಬೀದಿ, ಯಲಚವಾಡಿ, ಕಲ್ಲನಕುಪ್ಪೆ, ಬನವಾಸಿ, ತಟ್ಟೆಕೆರೆ, ಮಲ್ಲಿಗೆಮೆಟ್ಲು, ತೋಕಸಂದ್ರ. ಎಂ.ಮನಿಯಂಬಾಳ್‌, ಟಿ.ಹೊಸಹಳ್ಳಿ, ಚೀಲೂರು, ದೊಡ್ಡಮರಳವಾಡಿ, ದೊಡ್ಡಸದೇನಹಳ್ಳಿ, ಅವರೆಮಾಳ, ಗೋಡೂರು ವೃತ್ತಗಳ ವ್ಯಾಪ್ತಿಗೆ ಬರುವ 83 ಗ್ರಾಮಗಳನ್ನು ಒಳಗೊಂಡಂತೆ ನೂತನ ತಾಲೂಕು ಸೃಜಿಸಲು ಸರ್ಕಾರ ಗೆಜೆಟ್‌ ಹೊರಡಿಸಿದೆ.

Advertisement

ನೂತನ ಹಾರೋಹಳ್ಳಿ ತಾಲೂಕಿಗೆ ಗಡಿ: ಕನಕಪುರ ತಾಲೂಕಿನಿಂದ ಬೇರ್ಪಡಿಸಿ ನೂತನವಾಗಿ ಸೃಜನೆಯಾಗುವ ಹಾರೋಹಳ್ಳಿ ತಾಲೂಕಿನ ಪೂರ್ವಕ್ಕೆ ತಮಿಳುನಾಡಿನ ಧರ್ಮಪುರಿ ಜಿಲ್ಲೆ, ಪಶ್ವಿ‌ಮಕ್ಕೆ ರಾಮನಗರ ತಾಲೂಕು, ಉತ್ತರಕ್ಕೆ ಬೆಂಗಳೂರು ದಕ್ಷಿಣ ತಾಲೂಕು ಮತ್ತು ಆನೇಕಲ್‌ ತಾಲೂಕುಗಳ ಗಡಿ ಹಾಗೂ ದಕ್ಷಿಣದಲ್ಲಿ ಕನಕಪುರ ತಾಲೂಕಿನ ಗಡಿ ಇರಲಿದೆ.

ನೂತನ ತಾಲೂಕು ರಚನೆ ಸಂಬಂಧ ಲೋಕೋಪ ಯೋಗಿ ಇಲಾಖೆ ಸರ್ಕಾರಿ ಇಲಾಖೆಗಳ ಹೊಸ ಕಚೇರಿ ನಿರ್ಮಾಣಕ್ಕೆ ಅಂದಾಜು

ವೆಚ್ಚದ ಪಟ್ಟಿ ಸಿದ್ಧಪಡಿಸಿ 109 ಕೋಟಿ ರೂ.ಗಳ ಅಂದಾಜು ಪಟ್ಟಿ ನೀಡಿದೆ. ತಾಲೂಕು ಕಚೇರಿ ಸೇರಿದಂತೆ ಒಟ್ಟು 31 ಸರ್ಕಾರಿ ಕಚೇರಿಗಳು ನೂತನ ತಾಲೂಕಿನ ಆಡಳಿತ ನಡೆಸಲಿವೆ. ಹಾರೋಹಳ್ಳಿ ತಾಲೂಕು ಅಸ್ತಿತ್ವಕ್ಕೆ ಬಂದರೆ ತಾತ್ಕಾಲಿಕವಾಗಿ ಹೊಸ ಕಚೇರಿ ಆರಂಭಿಸಲು ಬೇಕಾದ ಆರ್ಥಿಕ ಲೆಕ್ಕಾಚಾರಗಳನ್ನು ಲೋಕೋಪಯೋಗಿ ಇಲಾಖೆ ವರದಿ ನೀಡಿದೆ.

 

-ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next