Advertisement

15 ಸಾವಿರ ಸಸಿ ನೆಡುವ ಗುರಿ

01:21 PM Jun 07, 2019 | Naveen |

ಹರಿಹರ: ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ನ್ಯಾಯಾಂಗ ಸಂಕೀರ್ಣದ ಆವರಣದಲ್ಲಿ ಗುರುವಾರ ನ್ಯಾಯಾಧೀಶರು ಕಕ್ಷಿದಾರರಿಗೆ ಸಸಿ ವಿತರಿಸಿದರು.

Advertisement

ನಂತರ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೈ.ಕೆ.ಬೇನಾಳ್‌, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆಗಳ ಸಹಯೋಗದಲ್ಲಿ ತಾಲೂಕಿನಾದ್ಯಂತ ಈಗಾಗಲೆ ಸಾವಿರಾರು ಸಸಿ ನೆಡಲಾಗಿದೆ. ತಾಲೂಕಿನ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜು, ಹಾಸ್ಟೇಲ್ ಆವರಣದಲ್ಲಿ 10ರಿಂದ 15 ಸಾವಿರ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದರು.

ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಸೇರಿದಂತೆ ಉತ್ತಮ ಪರಿಸರ ಕೊಡುವುದು ನಮ್ಮ ಕರ್ತವ್ಯ. ಕಕ್ಷಿದಾರರು ತಾವು ಪಡೆದಿರುವ ಸಸಿಗಳನ್ನು ತಮ್ಮ ಮನೆ, ಕಣಗಳ ಆವರಣ ಅಥವಾ ಜಮೀನುಗಳಲ್ಲಿ ನೆಟ್ಟು, ಪೋಷಣೆ ಮಾಡಬೇಕು ಎಂದರು.

2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅವಿನಾಶ್‌ ಚಿಂದು, 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಿದ್ದರಾಜು, ವಕೀಲರ ಸಂಘದ ಅಧ್ಯಕ್ಷ ನಾಗರಾಜು ಹಲವಾಗಲು, ಎಪಿಪಿ ಷಂಶೀರ್‌ ಅಲಿಖಾನ್‌, ಹಿರಿಯ ವಕೀಲರಾದ ಶ್ರೀನಿವಾಸ ಕಲಾಲ್, ಎಸ್‌.ಪ್ರಸನ್ನಕುಮಾರ್‌, ರಾಜಶೇಖರ್‌, ನ್ಯಾಯಾಲಯದ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next