Advertisement

ವೀರಶೈವ ಜಂಗಮರು ಪರಿಶಿಷ್ಟರಲ್ಲ

12:03 PM Sep 21, 2019 | Naveen |

ಹರಿಹರ: ವೀರಶೈವ ಲಿಂಗಾಯಿತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡದಂತೆ ಆಗ್ರಹಿಸಿ ದಸಂಸ (.ಪ್ರೊ ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಅರೆಬೆತ್ತಲೆ ಅಣಕು ಶವಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು.

Advertisement

ಪಕ್ಕೀಸ್ವಾಮಿ ಮಠದಿಂದ ಶಿವಮೊಗ್ಗ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ,
ಗಂ  ವೃತ್ತದ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದ ಪ್ರತಿಭಟನಾಕಾರರು ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‌ ರೆಹಾನ್‌ ಪಾಷಾಗೆ ಮನವಿ ನೀಡಿದರು. ನಂತರ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್‌ ಮಾತನಾಡಿ, ಶೋಷಿತರ ಅಭಿವೃದ್ಧಿಗೆ ಸಂವಿಧಾನ ಎಸ್ಸಿ, ಎಸ್ಟಿಯಡಿ ಮೀಸಲಾತಿ ಕಲ್ಪಿಸಿದ್ದು, ಅಲೆಮಾರಿಗಳಾದ ಬೇಡ ಜಂಗಮ, ಬುಡ್ಗ ಜಂಗಮ ಜಾತಿಗಳನ್ನು ಎಸ್ಸಿ ಎಂದು ಪರಿಗಣಿಸಲಾಗಿದೆ. ಆದರೆ ಮೇಲ್ವರ್ಗದ ಕೆಲವು ಲಿಂಗಾಯಿತ ಜಂಗಮರು ಸಹ ಬೇಡ ಜಂಗಮರೆಂದು ಸುಳ್ಳು ಎಸ್ಸಿ ಪ್ರಮಾಣ ಪತ್ರ ಪಡೆದು ಶೋಷಿತ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಖೀಲ ಕರ್ನಾಟಕ ಡಾ.ಅಂಬೇಡ್ಕರ್‌ ಬೇಡ ಜಂಗಮ್‌ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಹೆಸರಿನ ಸಂಸ್ಥೆಯೊಂದು ಲಿಂಗಾಯಿತ ಜಂಗಮರಿಗೆ ಬೇಡ ಜಂಗಮ ಎಂಬ ಗುರುತಿನ ಚೀಟಿ ವಿತರಿಸುತ್ತಿದೆ. ಕೆಲ ಅಧಿ ಕಾರಿಗಳು ಸದರಿ ಸಂಸ್ಥೆಯ ಕಾನೂನು ಮಾನ್ಯತೆಯಿಲ್ಲದ ಗುರುತಿನ ಚೀಟಿ ಪರಿಗಣಿಸಿ ಎಸ್ಸಿ ಪ್ರಮಾಣಪತ್ರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯಿತ ಉಪಜಾತಿಯಾದ ಜಂಗಮ ಜನಾಂಗಕ್ಕೂ ಮತ್ತು ಬೇಡ ಅಥವಾ ಬುಡ್ಗ ಜಂಗಮ ಜನಾಂಗಕ್ಕೂ ಯಾವುದೇ ಸಂಬಂಧವಿಲ್ಲವೆಂದು ಅಂತ್ರೋಪಾಲಜಿಕಲ್‌ ಸರ್ವೆ ಆಫ್‌ ಇಂಡಿಯಾ ಸ್ಪಷ್ಟಪಡಿಸಿದ್ದರೂ ಈ ಕುರಿತು ಸೂಕ್ತ ಮಾಹಿತಿ ಇಲ್ಲದ್ದರಿಂದ ರಾಜಕೀಯ ಒತ್ತಡ, ಪ್ರಭಾವಗಳಿಗೆ ಮಣಿದು ಅನರ್ಹರಿಗೂ ಅಧಿಕಾರಿಗಳು ಅನುಸೂಚಿತ ಜಾತಿ ಪ್ರಮಾಣಪತ್ರ ನೀಡಲು ಮುಂದಾಗತ್ತಿರುವುದು ಖಂಡನೀಯವಾಗಿದೆ ಎಂದರು.

ಲಿಂಗಾಯಿತ ಜಂಗಮರ ಶಾಲಾ ದಾಖಲೆಯಲ್ಲಿ ಬೇಡ ಜಂಗಮ ಎಂಬ ಜಾತಿ ನಮೂದನೆ ಆಧರಿಸಿ ಪರಿಶಿಷ್ಟ ಜಾತಿ ಪತ್ರ ನೀಡುತ್ತಿರುವುದು ಕಾನೂನು ಬಾಹಿರ. ಹರಿಹರ ತಹಶೀಲ್ದಾರರು ಲಿಂಗಾಯಿತ ಜಂಗಮರೊಬ್ಬರಿಗೆ ಇದೆ ರೀತಿ ಎಸ್ಸಿ ಪ್ರಮಾಣಪತ್ರ ನೀಡಿದ್ದು, ಇದರ ವಿರುದ್ಧ ದಸಂಸ ಈಗಾಗಲೆ ದಾವಣಗೆರೆ ಎಸಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ ಎಂದರು.

Advertisement

ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೆ ಈ ಕುರಿತು ಎಲ್ಲಾ ತಹಶೀಲ್ದಾರರಿಗೂ ಸೂಕ್ತ ನಿರ್ದೇಶನ ನೀಡಿ ಇದನ್ನು ತಡೆಯಬೇಕು, ತಪ್ಪಿದಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ನೀಡುವ ಅಧಿಕಾರಿಗಳ ವಿರುದ್ಧ ಡಿಎಸ್‌ ಎಸ್‌ನಿಂದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದು ಸೇರಿದಂತೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವಾಗೀಶ್‌ ಬನ್ನಿಕೋಡು, ಅಂಜನಪ್ಪ ನಿಟ್ಟೂರು, ಅಣ್ಣಪ್ಪ ಕುಣೆಬೆಳೆಕೆರೆ,
ಹರಳಯ್ಯ, ಭರತ್‌ ಎಸ್‌.ಪಿ., ಕಿರಣ್‌ ಬಿ., ರವಿ ಬಿ., ನವೀನ್‌ ಎನ್‌.ಟಿ., ಶಿವರಾಜ್‌, ಪರಶುರಾಮ್‌, ಮಧು ಎನ್‌.ಪಿ., ಹರೀಶ್‌ ಬಿ.ಎಚ್‌., ಹಾಲೇಶ್‌, ರಾಜಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next