Advertisement

ನೆರೆ ಸಂತ್ರಸ್ತರಿಗೆ ಶಿಕ್ಷಕಿಯರ ನೆರವು

10:35 AM Aug 26, 2019 | Naveen |

ಹರಿಹರ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘದ ಪದಾಧಿಕಾರಿಗಳು ಧಾರವಾಡ ಸಮೀಪದ ಅಳ್ನಾವರಕ್ಕೆ ತೆರಳಿ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಶನಿವಾರ ವಿತರಿಸಿದರು.

Advertisement

ತಾಲೂಕಿನ ಶಿಕ್ಷಕಿಯರಿಂದ ಸಂಗ್ರಹಿಸಿದ ಮಹಿಳೆ ಮತ್ತು ಮಕ್ಕಳ 50 ಉಡುಪುಗಳು, 50 ಸ್ವೆಟರ್‌, 250 ಸೀರೆ, 2 ಕ್ವಿಂಟಲ್ ಅಕ್ಕಿ, 1000 ರೊಟ್ಟಿ, ಚಟ್ನಿ ಪುಡಿ, ಬಾಣಂತಿಯರಿಗೆ ಗೋಧಿ ನುಚ್ಚು, ಸೋಪು, ಮಕ್ಕಳಿಗೆ ಪೆನ್ಸಿಲ್, ರಬ್ಬರ್‌, 500 ನೋಟ್ ಬುಕ್‌, ಸ್ಕೂಲ್ ಬ್ಯಾಗ್‌ ಇತರೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.

ಸಾವಿತ್ರಬಾಯಿ ಫುಲೆ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ್‌, ತಾಲೂಕಿನ ಶಿಕ್ಷಕಿಯರಾದ ಶಾರದಮ್ಮ, ಜ್ಯೋತಿ, ಸುನೀತಾ, ಸಾಕಮ್ಮ, ಸುಜಾತಾ, ಕಲ್ಪನಾ, ಪುಷ್ಪಾವತಿ, ಸುವರ್ಣಮ್ಮ, ರೇಖಾ, ಅನುಸೂಯಮ್ಮ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next