Advertisement

ಬಿಜೆಪಿಯಿಂದ ಜಾಗೃತಿ ಜಾಥಾ

03:59 PM Jun 19, 2020 | Naveen |

ಹರಿಹರ: ಮಾಸ್ಕ್ ದಿನಾಚರಣೆ ನಿಮಿತ್ತ ನಗರದಲ್ಲಿ ಗುರುವಾರ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಜಾಗೃತಿ ಜಾಥಾ ನಡೆಸಿದರು.

Advertisement

ಪಕ್ಷದ ಕಚೇರಿಯಿಂದ ಕಾಲ್ನಡಿಗೆಯಲ್ಲಿ ಹೊರಟ ಮುಖಂಡರು ಶಿವಮೊಗ್ಗ ರಸ್ತೆ, ಮುಖ್ಯ ರಸ್ತೆ ಮೂಲಕ ಸಂಚರಿಸಿದರು. ಚೆನ್ನಮ್ಮ ವೃತ್ತ, ಗಾಂಧಿ ವೃತ್ತದಲ್ಲಿ ಸಾರ್ವಜನಿಕರಿಗೆ ಮುಖಕ್ಕೆ ಮಾಸ್ಕ್ ಹಾಕುವುದರ ಮಹತ್ವ ವಿವರಿಸಿದರು. ಜಿಪಂ ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ ಮಾತನಾಡಿ, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದರಿಂದ ಮಾತ್ರ ನಾವು ಮಾರಕ ಕೋವಿಡ್ ವೈರಸ್‌ ನಿಂದ ಪಾರಾಗಬಹುದು. ವೈರಸ್‌ ಪ್ರಸರಣ ತಡೆಗೆ ಹಗಲಿರುಳು ಶ್ರಮಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು ಎಂದರು.

ನಗರಸಭಾ ಸದಸ್ಯರಾದ ನೀತಾ ಮೆಹರ್ವಾಡೆ, ಅಶ್ವಿ‌ನಿ ಕೃಷ್ಣ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್‌ ಸಾವಂತ್‌, ದೂಡಾ ಸದಸ್ಯ ರಾಜು ರೋಖಡೆ, ಮುಖಂಡರಾದ ಮಂಜಾ ನಾಯ್ಕ, ರಾಜೇಶ್‌ ವರ್ಣೇಕರ್‌, ಪ್ರವೀಣ್‌ ಜಿ. ಪವಾರ್‌, ರಾಘವೇಂದ್ರ ಉಪಾಧ್ಯಾಯ, ಆನಂದ್‌, ಐರಣಿ ಮಂಜುನಾಥ್‌, ತುಳಜಪ್ಪ ಭೂತೆ, ಮೋತ್ಯಾ ನಾಯ್ಕ, ರಾಚಪ್ಪ, ಪ್ರಶಾಂತ್‌ಕುಮಾರ್‌, ಸುನೀಲ್‌ ಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next