Advertisement

ಹರೇಕಳ ದರೋಡೆ, ಕೊಲೆಯತ್ನ ಪ್ರಕರಣ: 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

12:47 AM Mar 20, 2024 | Team Udayavani |

ಉಳ್ಳಾಲ: ಹರೇಕಳ ಕಡವಿನಬಳಿಯ ಅಂಗಡಿ ಮಾಲಕನ ದರೋಡೆ ಮತ್ತು ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಉಳ್ಳಾಲ ಉಳಿಯ ನಿವಾಸಿ ರಾಜೇಶ್‌ ಸುವರ್ಣ (24) ನನ್ನು ಎಸಿಪಿ ಧನ್ಯಾ ನಾಯಕ್‌ ನೇತೃತ್ವದ ಮಾದಕದ್ರವ್ಯ ವಿರೋಧಿ ಪೊಲೀಸ್‌ ತಂಡ ಬಂಧಿಸಿದೆ.

Advertisement

ಎನ್‌. ಎಫ್‌. ಜನರಲ್‌ ಸ್ಟೋರ್‌ ಮಾಲಕ ಅಬ್ದುಲ್‌ ರಹಿಮಾನ್‌ ಅವರ ಮೇಲೆ 2017ರ ಮೇ 24ರಂದು ರಿûಾದಲ್ಲಿ ಬಂದಿದ್ದ ಅಶ್ರಫ್‌ ಮತ್ತು ಮೂವರು ಸೇರಿ ರಾತ್ರಿ 10ಕ್ಕೆ ಅಂಗಡಿಯೊಳಕ್ಕೆ ನುಗ್ಗಿ ತಲವಾರು ತೋರಿಸಿ ಪೊಲೀಸರಿಗೆ ಮಾಹಿತಿ ನೀಡುತ್ತೀಯಾ ಎಂದು ಅವಾಚ್ಯವಾಗಿ ಬೈದು, ತಲವಾರಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ಅಲ್ಲದೆ ಕ್ಯಾಷಿಯರ್‌ನಲ್ಲಿದ್ದ 50,000 ರೂ. ಹಣವನ್ನು ದರೋಡೆ ಮಾಡಿದ್ದರು. ಈ ಸಂಬಂಧ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಅಶ್ರಫ್‌ ಸೇರಿದಂತೆ ರಾಜೇಶ್‌ ಹಾಗೂ ಇನ್ನೋರ್ವನ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಶ್ರಫ್‌ ಹಾಗೂ ಇನ್ನೋರ್ವನನ್ನು ಪೊಲೀಸರು ಆಗಲೇ ಬಂಧಿಸಿದ್ದು, ಇದೀಗ ಏಳು ವರ್ಷಗಳ ಅನಂತರ ರಾಜೇಶನ ಬಂಧನವಾಗಿದೆ.ಆರೋಪಿಗಳ ವಿರುದ್ಧ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next