Advertisement

ಹರೆಗೋಡು ರಸ್ತೆ ಹೊಂಡಮಯ: ವಾಹನ ಸವಾರರ ಸರ್ಕಸ್‌

09:55 PM Oct 13, 2019 | Sriram |

ಹೆಮ್ಮಾಡಿ: ಹೆಮ್ಮಾಡಿ – ಕೊಲ್ಲೂರು ಮುಖ್ಯ ರಸ್ತೆಯ ಕಟ್‌ಬೆಲೂ¤ರು ಬಳಿಯಿಂದ ಹರೆಗೋಡಿಗೆ ಸಂಪರ್ಕ ಕಲ್ಪಿಸುವ ಪಂಚಾಯತ್‌ ರಸ್ತೆಯೂ ಹೊಂಡ – ಗುಂಡಿಮಯವಾಗಿದ್ದು, ಈ ಮಾರ್ಗ ದಲ್ಲಿ ವಾಹನಗಳು ಸಂಚರಿಸುವುದೇ ಕಷ್ಟಕರವಾಗಿದೆ.

Advertisement

ಮುಖ್ಯರಸ್ತೆಯಿಂದ ಹರೆಗೋಡಿನ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಹೋಗಲು ಕೂಡ ಈ ರಸ್ತೆ ಪ್ರಮುಖವಾಗಿದ್ದು, ಈ ಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ಹತ್ತಾರು ವಾಹನಗಳು ನಿತ್ಯ ಸಂಚರಿಸುತ್ತವೆ.

ಸುಮಾರು 2 ಕಿ.ಮೀ. ದೂರದ ರಸ್ತೆಯಲ್ಲಿ ಮೊದಲಿಗೆ ಅಂದಾಜು 200 ಮೀ.ವರೆಗೆ ಡಾಮರು ಆಗಿದೆ. ಬಳಿಕ ಮಧ್ಯದಲ್ಲಿ ಸುಮಾರು 100 ಮೀ.ವರೆಗೆ ಕಳೆದ ವರ್ಷ ಜಿ.ಪಂ. ಅನುದಾನದಡಿ 3 ಲ.ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಮಾಡಲಾಗಿತ್ತು. 8 ವರ್ಷಗಳ ಹಿಂದೆ ಈ ರಸ್ತೆಯ ಆರಂಭದಿಂದ ಸುಮಾರು 200 ಮೀ. ವರೆಗೆ ಡಾಮರುಗೊಂಡಿತ್ತು. ಆದರೆ ಅದು ಕೂಡ ಅಲ್ಲಲ್ಲಿ ಎದ್ದು ಹೋಗಿದೆ.

ಚರಂಡಿಯೇ ಇಲ್ಲ
ಈ ರಸ್ತೆ ಇಷ್ಟೊಂದು ಹೊಂಡ – ಗುಂಡಿಗಳಿರಲು ಪ್ರಮುಖ ಕಾರಣ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೇ ಇಲ್ಲ. ಇದ್ದರೂ ಅದು ಹೂಳು ತುಂಬಿ, ಗಿಡ – ಗಂಟಿ ಬೆಳೆದು ನೀರು ಹರಿಯದಂತಾಗಿದೆ. ಇದರಿಂದ ರಸ್ತೆಯಲ್ಲಿಯೇ ನೀರು ನಿಂತು, ದೊಡ್ಡ – ದೊಡ್ಡ ಗುಂಡಿಗಳು ಸೃಷ್ಟಿಯಾಗಿದ್ದು, ಅಪಘಾತವನ್ನು ಆಹ್ವಾನಿಸುವಂತಿದೆ.

ಶಾಸಕರ ಅನುದಾನ ಮಂಜೂರು
ಈ ರಸ್ತೆಯ ಸಂಪೂರ್ಣ ಡಾಮರಿಗೆ ಹೆಚ್ಚಿನ ಅನುದಾನ ಬೇಕಾಗಿದೆ. ಆದರೆ ಈ ವರ್ಷ ಶಾಸಕ ಸುಕುಮಾರ್‌ ಶೆಟ್ಟಿ ಅವರು ರಸ್ತೆಯ ಅರ್ಧ ಭಾಗದ ಕಾಮಗಾರಿಗೆ ಸುಮಾರು 4-5 ಲ.ರೂ ಅನುದಾನ ಮಂಜೂರು ಮಾಡಿದ್ದು, ಶೀಘ್ರ ಕಾಮಗಾರಿ ಆರಂಭಿಸುವ ಬಗ್ಗೆ ಗಮನ ಹರಿಸಲಾಗುವುದು.
-ಶೋಭಾ ಜಿ. ಪುತ್ರನ್‌, ಸ್ಥಳೀಯ ಜಿ.ಪಂ. ಸದಸ್ಯರು

Advertisement

ತುರ್ತಾಗಿ ದುರಸ್ತಿಗೊಳಿಸಿ
ಈ ಹಿಂದೆ ಹಲವು ಬಾರಿ ಶಾಸಕರು ಸಹಿತ ಸಂಬಂಧಪಟ್ಟ ಎಲ್ಲರಿಗೂ ಈ ರಸ್ತೆ ಡಾಮರಿಗೆ ಮನವಿ ಮಾಡಲಾಗಿದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಈಗ ಸ್ವಲ್ಪ ಮಟ್ಟಿಗೆ ಮಳೆ ಕಡಿಮೆಯಾಗಿದ್ದು, ಈಗಲಾದರೂ ಈ ರಸ್ತೆಯ ದುರಸ್ತಿ ಬಗ್ಗೆ ಗಮನಹರಿಸಲಿ.
-ವಿಶ್ವನಾಥ್‌ ಹರೆಗೋಡು, ರಿಕ್ಷಾ ಚಾಲಕರು,

Advertisement

Udayavani is now on Telegram. Click here to join our channel and stay updated with the latest news.

Next