Advertisement

ಬಿಜೆಪಿ ಸರ್ಕಾರದಿಂದ ಜನತೆಗೆ ಸಂಕಷ್ಟ

12:54 PM Apr 02, 2021 | Team Udayavani |

ಚಳ್ಳಕೆರೆ: ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಜನಸಾಮಾನ್ಯರಸಂಕಷ್ಟಗಳಿಗೆ ಸ್ಪಂದಿಸದೆ ಬೆಲೆ ಏರಿಕೆಯಲ್ಲಿನಿರತವಾಗಿದೆ ಎಂದು ಜಿಪಂ ಸದಸ್ಯ ಡಾ| ಬಿ.ಯೋಗೇಶ್‌ಬಾಬು ಆರೋಪಿಸಿದರು.

Advertisement

ತಾಲೂಕಿನ ತಳಕು ಗ್ರಾಮದಲ್ಲಿ ತಳಕು ಬ್ಲಾಕ್‌ಕಾಂಗ್ರೆಸ್‌ ಘಟಕದ ನೂತನ ಕಾರ್ಯಾಲಯಉದ್ಘಾಟಿಸಿ ಅವರು ಮಾತನಾಡಿದರು. ನಿತ್ಯಉಪಯೋಗಿಸುವ ಆಹಾರ ಪದಾರ್ಥ ಹಾಗೂಇತರ ಎಲ್ಲಾ ಪದಾರ್ಥಗಳ ಬೆಲೆ ಗಗನಕ್ಕೇರಿದೆ.ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳದಿಂದ ಬಡವರಬದುಕು ಬೀದಿಗೆ ಬಂದಿದೆ. ಜನರು ಬಿಜೆಪಿಸಹವಾಸವೇ ಬೇಡ, ಕಾಂಗ್ರೆಸ್‌ ಮಾತ್ರ ಜನರ ಕಷ್ಟಕ್ಕೆಸ್ಪಂದಿಸುತ್ತದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆಎಂದರು.

ಗ್ರಾಮೀಣ ಭಾಗದ ಜನರು ಹಲವಾರು ವಿಚಾರಗಳ ಬಗ್ಗೆ ನಗರ ಪ್ರದೇಶಕ್ಕೆ ಹೋಗುವುದನ್ನುತಪ್ಪಿಸಬೇಕಿದೆ. ಅದಕ್ಕಾಗಿ ಇಲ್ಲಿಯೇ ಪಕ್ಷದಕಚೇರಿ ತೆರೆದು ಜನರ ಸಮಸ್ಯೆಗಳಿಗೆಸ್ಪಂದಿಸಲಾಗುವುದು.

ಸರ್ಕಾರದ ಹಲವಾರುಯೋಜನೆಗಳ ಜಾರಿ ಕುರಿತಂತೆ ಜನಸಾಮಾನ್ಯರಿಗೆಮಾರ್ಗದರ್ಶನ ಮಾಡಲಾಗುವುದು. ಪ್ರತಿನಿತ್ಯಜನರೊಂದಿಗೆ ಸಂಪರ್ಕ ಹೊಂದಲು ಈ ಕಚೇರಿಉಪಯುಕ್ತವಾಗಲಿದೆ ಎಂದು ತಿಳಿಸಿದರು.ಮಾಜಿ ಶಾಸಕ ಎಸ್‌. ತಿಪ್ಪೇಸ್ವಾಮಿ ಮಾತನಾಡಿ,ನಗರ ಪ್ರದೇಶದಲ್ಲಿ ಮಾತ್ರ ಬಿಜೆಪಿ ಬಗ್ಗೆ ಜನರಲ್ಲಿವಿಶ್ವಾಸವಿತ್ತು.

ಇತ್ತೀಚೆಗೆ ನಡೆದ ವಿಧಾನಸಭೆ ಮತ್ತುಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚುಸ್ಥಾನ ಗಳಿಸಿತ್ತು. ಆದರೆ ಆ ಪಕ್ಷ ಜನರ ವಿಶ್ವಾಸಕ್ಕಿಂತಕೇವಲ ಹಣ ಬಲದಿಂದ ಚುನಾವಣೆಯನ್ನುಗೆಲ್ಲುತ್ತಾ ಬಂದಿದೆ. ಜಿಲ್ಲಾ ಹಾಗೂ ತಾಲೂಕುಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠಕಲಿಸಬೇಕೆಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡಕೃಷ್ಣಮೂರ್ತಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

Advertisement

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ, ಉಪಾಧ್ಯಕ್ಷೆದ್ರಾûಾಯಣಮ್ಮ, ಮುಖಂಡರಾದ ಸಣ್ಣೋಬಯ್ಯ,ಯಜಮಾನ ಓಬಯ್ಯ, ಟಿ.ಎ.ಟಿ ಕುಮಾರಣ್ಣ,ಅಣ್ಣಪ್ಪ, ಮಂಜುನಾಥ, ರವಿಚಂದ್ರ,ಕೃಷ್ಣಮೂರ್ತಿ, ಚಂದ್ರಣ್ಣ, ಯಾದಲಗಟ್ಟೆ ಜಗನ್ನಾಥಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next