Advertisement

ಪ್ರಧಾನಿ ಗುಜರಾತ್‌ಗೆ ಭೇಟಿ ವಿರೋಧಿಸಿ ಹಾರ್ದಿಕ್‌ ಕೇಶಮುಂಡನ!

12:15 PM May 22, 2017 | Team Udayavani |

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರು ತವರು ರಾಜ್ಯ ಗುಜರಾತ್‌ಗೆ ಭೇಟಿ ನೀಡುತ್ತಿರುವ ಮುನ್ನಾ ದಿನವೇ, ಪಟೇಲರ ಮೀಸಲು ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ ಹಾಗೂ ಅವರ 50 ಮಂದಿ ಹಿಂಬಾಲಕರು ತಲೆ ಬೋಳಿಸಿಕೊಂಡು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. “ಕಳೆದ 2 ವರ್ಷಗಳಿಂದ ಗುಜರಾತ್‌ನ ಬಿಜೆಪಿ ಸರಕಾರ ಪಟೇಲ್‌ ಸಮುದಾಯದ ಮೇಲೆ ದೌರ್ಜನ್ಯ ಎಸಗುತ್ತಿದೆ. ಇದನ್ನು ವಿರೋಧಿಸಿ ನಾವು ಕೇಶಮುಂಡನ ಮಾಡಿಸಿಕೊಂಡಿದ್ದು, “ನ್ಯಾಯ ಯಾತ್ರೆ’ ನಡೆಸಲು ನಿರ್ಧರಿಸಿದ್ದೇವೆ’ ಎಂದು ಹಾರ್ದಿಕ್‌ ಪಟೇಲ್‌ ತಿಳಿಸಿದ್ದಾರೆ. ಲಥಿಬಾದ್‌ ಗ್ರಾಮದಲ್ಲಿ ಕೇಶ ಮುಂಡನ ಮಾಡಿಕೊಂಡ ಪಟೇಲ್‌ ಹಾಗೂ 50 ಸದಸ್ಯರು, 155 ಕಿ.ಮೀ. “ನ್ಯಾಯ ಯಾತ್ರೆ’ ನಡೆಸಲಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next