Advertisement

ಹಾರ್ದಿಕ್‌ ಉಪವಾಸ ಸತ್ಯಾಗ್ರಹ 11ನೇ ದಿನಕ್ಕೆ: 20 ಕಿಲೋ ಇಳಿದ ದೇಹತೂಕ

03:49 PM Sep 04, 2018 | Team Udayavani |

ಅಹ್ಮದಾಬಾದ್‌ : ಪಾಟಿದಾರ್‌ ಸಮುದಾಯಕ್ಕೆ ಮೀಸಲಾತಿಯನ್ನು ಆಗ್ರಹಿಸಿ ಕಳೆದ 11 ದಿನಗಳಿಂದ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರ ದೇಹ ತೂಕ 20 ಕೆಜಿ ನಷ್ಟವಾಗಿದೆ.

Advertisement

ನಿರಶನ ಸತ್ಯಾಗ್ರಹ ಆರಂಭಕ್ಕೆ ಮುನ್ನ 78 ಕೆಜಿ ಇದ್ದ ಹಾರ್ದಿಕ್‌ ಈಗ 58 ಕೆಜಿಗೆ ಇಳಿದಿದ್ದಾರೆ ಎಂದು ಅವರೊಂದಿಗಿರುವ ವೈದ್ಯರು ತಿಳಿಸಿದ್ದಾರೆ. ಹಾರ್ದಿಕ್‌ ದೈಹಿಕವಾಗಿ ತುಂಬ ದುರ್ಬಲರಾಗಿದ್ದಾರೆ ಎಂದವರು ಹೇಳಿದ್ದಾರೆ. 

ಈ ನಡುವೆ ಸರಕಾರದ ಸೂಚನೆಯ ಪ್ರಕಾರ ಸೋಲಾ ಸಿವಿಲ್‌ ಹಾಸ್ಪಿಟಲ್‌, ಸಕಲ ಸೌಕರ್ಯ ಹೊಂದಿರುವ “ಐಸಿಯು ಆನ್‌ ವೀಲ್ಸ್‌’ ಪರಿಪೂರ್ಣ ಅಂಬುಲೆನ್ಸ್‌ ವಾಹನವನ್ನು ಹಾರ್ದಿಕ್‌ ನಿರಶನ ತಾಣದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. 

ತನ್ನ ನಿವಾಸಕ್ಕೆ ಭೇಟಿಕೊಡುತ್ತಿರುವ ಜನರಿಗೆ ಪೊಲೀಸರು ಕಿರುಕುಳ ಕೊಡುವುದನ್ನು ನಿಲ್ಲಿಸುವ ತನಕ ತನ್ನ ಮೇಲೆ ವೈದ್ಯಕೀಯ ಚಿಕಿತ್ಸೆ ನಡೆಸುವುದಕ್ಕೆ ತಾನು ವೈದ್ಯರಿಗೆ ಅವಕಾಶ ಕೊಡುವುದಿಲ್ಲ ಎಂದು  ಹಾರ್ದಿಕ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next