Advertisement

ಸ್ಪರ್ಧೆಗೆ ಅಡ್ಡಿಯಾದ ಆದೇಶ ಪ್ರಶ್ನಿಸಿ ಹಾರ್ದಿಕ್‌ ಪಟೇಲ್‌ ಸುಪ್ರೀಂ ಕೋರ್ಟಿಗೆ

09:23 AM Apr 02, 2019 | Team Udayavani |

ಹೊಸದಿಲ್ಲಿ : 2015ರ ವೀಸ್‌ಪುರ ದೊಂಬಿ ಪ್ರಕರಣದಲ್ಲಿ ತಾನು ದೋಷಿ ಎಂದು ಘೋಷಿಸಲಾದುದಕ್ಕೆ ತಡೆಯಾಜ್ಞೆ ನೀಡಬೇಕೆಂಬ ತನ್ನ ಕೋರಿಕೆಯನ್ನು ತಿರಸ್ಕರಿಸಿರುವ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ್ದಾರೆ.

Advertisement

ಹಾರ್ದಿಕ್‌ ಅವರ ಮನವಿ ತುರ್ತು ವಿಚಾರಣೆಗಾಗಿ ಮಂಗಳವಾರ ಉಲ್ಲೇಖಗೊಳ್ಳುವ ಸಾಧ್ಯತೆ ಇದೆ. ಹಾರ್ದಿಕ್‌ ಅವರು ಲೋಕಸಭೆಗೆ ಸ್ಪರ್ಧಿಸುವುದಕ್ಕೆ ಅಡ್ಡಿ ಉಂಟುಮಾಡಿರುವ ಹೈಕೋರ್ಟಿನ ಮಾರ್ಚ್‌ 29ರ ಆದೇಶಕ್ಕೆ ತಡೆ ನೀಡಬೇಕೆಂದು ಹಾರ್ದಿಕ್‌ ಅವರ ವಕೀಲರು ಕೋರಲಿದ್ದಾರೆ.

ಹಾರ್ದಿಕ್‌ ಪಟೇಲ್‌ ಅವರು ಜಾಮ್‌ನಗರದಿಂದ ಕಾಂಗ್ರೆಸ್‌ ಟಿಕೆಟ್‌ ಮೂಲಕ ಲೋಕಸಭೆಗೆ ಸ್ಪರ್ಧಿಸುವ ತಯಾರಿ ನಡೆಸುತ್ತಿದ್ದಾರೆ; ನಾಮಪತ್ರ ಸಲ್ಲಿಕೆಗೆ ಎಪ್ರಿಲ್‌ 4 ಕೊನೇ ದಿನವಾಗಿದೆ.

ಗುಜರಾತ್‌ನ 26 ಲೋಕಸಭಾ ಸೀಟುಗಳಿಗೆ ಎಪ್ರಿಲ್‌ 23ರಂದು ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next