Advertisement

ಜೀವ ಬೆದರಿಕೆ ; ಭದ್ರತೆ ಕೋರಿ ಅರ್ಜಿ ಸಲ್ಲಿಸಿದ ಹಾರ್ದಿಕ್‌ ಪಟೇಲ್‌

08:50 AM Apr 22, 2019 | Team Udayavani |

ಜಾಮ್‌ನಗರ್‌: ಜನ್‌ ಆಕ್ರೋಶ್‌ ಸಭೆಯಲ್ಲಿ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ ಬಳಿಕ ಕಾಂಗ್ರೆಸ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರು ಭದ್ರತೆ ಕೋರಿ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

Advertisement

ಜಾಮ್‌ನಗರದ ಎಸ್‌ಪಿಗೆ ಪತ್ರ ಬರೆದಿರುವ ಹಾರ್ದಿಕ್‌ ಪಟೇಲ್‌, ರೋಡ್‌ ಶೋ ವೇಳೆ ನನ್ನ ಮೇಲೆ ಸಮಾಜವಿದ್ರೋಹಿಗಳು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಭಯ ಹೊರ ಹಾಕಿದ್ದಾರೆ.

ನನಗೆ ಜೀವ ಭಯವಿದ್ದು ಅಗತ್ಯ ಭದ್ರತೆಯನ್ನು ಒದಗಿಸಿ ಎಂದು ಹಾರ್ದಿಕ್‌ ಕೇಳಿಕೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿರುವ ಹಾರ್ದಿಕ್‌ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಗುಜರಾತ್‌ನಲ್ಲಿ 26 ಸ್ಥಾನಗಳಿಗೆ ಎಪ್ರಿಲ್‌ 23 ರಂದು ಮತದಾನ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next