ಲಂಡನ್: ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯುಟಿಸಿ) ಫೈನಲ್ ನಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಡುವ ಅವಕಾಶ ಪಡೆದಿದ್ದರು ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಬಹಿರಂಗ ಪಡಿಸಿದರು.
ಹಾರ್ದಿಕ್ ಪಾಂಡ್ಯ ಅವರು ಇದುವರೆಗೆ 11 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ಒಂದು ಶತಕ ಮತ್ತು ನಾಲ್ಕು ಅರ್ಧ ಶತಕವನ್ನು ಅವರು ದಾಖಲಿಸಿದ್ದಾರೆ. ಭಾರತದ ಟಿ20 ನಾಯಕರೂ ಆಗಿರುವ ಹಾರ್ದಿಕ್ ಬದಲಿಗೆ ತಂಡದಲ್ಲಿ ಆಲ್ ರೌಂಡರ್ ಆಗಿ ಶಾರ್ದೂಲ್ ಠಾಕೂರ್ ಅವರನ್ನು ನೇಮಿಸಲಾಗಿದೆ.
ಇದನ್ನೂ ಓದಿ:ಪಠ್ಯದಲ್ಲಿ ಏನು ಓದಿಸಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ: ಸಚಿವ ಮಧು ಬಂಗಾರಪ್ಪ
“ಟೆಸ್ಟ್ ಕ್ರಿಕೆಟ್ ನ ಕಠಿಣತೆಯನ್ನು ತನ್ನ ದೇಹವು ಹೊಂದಿಕೊಳ್ಳುತ್ತಿಲ್ಲ ಎಂದು ಅವರು ಭಾವಿಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರು ಈ ರೀತಿಯ ಆಟದಿಂದ (ಟೆಸ್ಟ್) ಹೊರಗಿಡಲ್ಪಟ್ಟರು. ಕೇವಲ ಒಂದು ಟೆಸ್ಟ್ ಪಂದ್ಯಕ್ಕಾಗಿ ತಂಡದ ಸಮತೋಲನಕ್ಕೆ ಸಹಾಯ ಮಾಡಲು ಸಾಧ್ಯವೇ? ಕಳೆದೆರಡು ವರ್ಷಗಳಲ್ಲಿ ಈ ಆಟದಲ್ಲಿ ಸಾಗಿ ಬಂದಿರುವ ಪ್ರತಿಯೊಬ್ಬರಿಗೂ ಇದು ನ್ಯಾಯಯುತವಾಗದು ಎಂದು ಅವರು ಭಾವಿಸಿದರು ಎಂಬುದು ಅವರ ಉತ್ತರದಿಂದ ಸ್ಪಷ್ಟವಾಗಿತ್ತು” ಎಂದು ಮೊದಲ ದಿನದಂದು ಕಾಮೆಂಟರಿ ಮಾಡುವಾಗ ಪಾಂಟಿಂಗ್ ಹೇಳಿದರು.
Related Articles
ಅದಕ್ಕೂ ಮೊದಲು ಇಂಗ್ಲೆಂಡ್ ನ ಮಾಜಿ ನಾಯಕ ನಾಸಿರ್ ಹುಸೇನ್ ಅವರು ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯನ್ನು ಪ್ರಶ್ನಿಸಿದರು. “ಇಂದು ಬೆಳಿಗ್ಗೆ ಟಾಸ್ ವೇಳೆ ಭಾರತವು ಅವರ ತಂಡದ ಬಗ್ಗೆ ಖಚಿತವಾಗಿರಲಿಲ್ಲ. ಆದರೆ ಆಸ್ಟ್ರೇಲಿಯಾವು ಸ್ಪಷ್ಟವಾಗಿತ್ತು. ಅವರಲ್ಲಿ ಕ್ಯಾಮರೂನ್ ಗ್ರೀನ್ ಆಲ್ ರೌಂಡರ್ ಆಗಿದ್ದಾರೆ” ಎಂದರು.