Advertisement

ರಣಜಿಯಿಂದ ಹಿಂದೆ ಸರಿದ ಹಾರ್ದಿಕ್‌ ಪಾಂಡ್ಯ

10:45 PM Feb 07, 2022 | Team Udayavani |

ವಡೋದರ: ಟೀಮ್‌ ಇಂಡಿಯಾಕ್ಕೆ ಮರಳಲು ಪ್ರಯತ್ನಿಸುತ್ತಿರುವ ಹಾರ್ದಿಕ್‌ ಪಾಂಡ್ಯ ಪ್ರಸಕ್ತ ಋತುವಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಿಂದ ದೂರ ಸರಿಯಲು ನಿರ್ಧರಿಸಿದ್ದಾರೆ.

Advertisement

ಸೋಮವಾರ ಪ್ರಕಟಗೊಂಡ 20 ಸದಸ್ಯರ ಬರೋಡ ತಂಡದ ಯಾದಿಯಲ್ಲಿ ಹಾರ್ದಿಕ್‌ ಪಾಂಡ್ಯ ಹೆಸರಿಲ್ಲ. ಕೇದಾರ್‌ ಜಾಧವ್‌ ನಾಯಕ, ವಿಷ್ಣು ಸೋಲಂಕಿ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಫೆ. 10ರಿಂದ ಮೊದಲ ಹಂತದ ರಣಜಿ ಸ್ಪರ್ಧೆ ಆರಂಭವಾಗಲಿದೆ.

ಕಳೆದ ವರ್ಷದ ಟಿ20 ವಿಶ್ವಕಪ್‌ ವೈಫ‌ಲ್ಯದ ಬಳಿಕ ಹಾರ್ದಿಕ್‌ ಪಾಂಡ್ಯ ಟೀಮ್‌ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಇದೇ ವೇಳೆ ಅವರು ನೂತನ ಅಹ್ಮದಾಬಾದ್‌ ಐಪಿಎಲ್‌ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ:ಪ್ರೊ ಕಬಡ್ಡಿ : ಜೈಪುರ್‌ ಪಿಂಕ್‌ ಪ್ಯಾಂಥರ್ ಎಂಟನೇ ಗೆಲುವು

ಹಾರ್ದಿಕ್‌ ಪಾಂಡ್ಯ ರಣಜಿಯಲ್ಲಿ ಆಡಿ ಫಾರ್ಮ್ ಹಾಗೂ ಫಿಟ್‌ನೆಸ್‌ ತೋರ್ಪಡಿಸಬೇಕಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಇತ್ತೀಚೆಗಷ್ಟೇ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next