Advertisement
ಅ. 19ರಂದು ಬಾಂಗ್ಲಾದೇಶ ವಿರುದ್ಧದ ಪುಣೆ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಜಾರಿ ಬಿದ್ದ ಪರಿ ಣಾಮ ಅವರ ಎಡ ಪಾದಕ್ಕೆ ಗಂಭೀರ ಏಟು ಬಿದ್ದಿತ್ತು. ಕೇವಲ 3 ಎಸೆತ ಎಸೆಯುವಷ್ಟರಲ್ಲಿ ಈ ದುರಂತ ಸಂಭವಿ ಸಿತ್ತು. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕರೆ ದೊಯ್ಯ ಲಾಯಿತು. ಬುಧವಾರ ಲಭಿಸಿದ ಮಾಹಿತಿ ಪ್ರಕಾರ ಅವರ ಪಾದದ ನೋವು ಇನ್ನೂ ಸಂಪೂರ್ಣ ವಾಸಿಯಾಗಿಲ್ಲ.
ಅ. 22ರಂದು ನ್ಯೂಜಿಲ್ಯಾಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯ ದಲ್ಲಿ ಹಾರ್ದಿಕ್ ಪಾಂಡ್ಯ ಆಡಿರ ಲಿಲ್ಲ. ಭಾರತದ ಮುಂದಿನ ಪಂದ್ಯ ಇರುವುದು ರವಿವಾರಕ್ಕೆ. ಎದುರಾಳಿ ಇಂಗ್ಲೆಂಡ್. ಈ ಪಂದ್ಯಕ್ಕೆ ಪಾಂಡ್ಯ ಲಭ್ಯ ರಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಹುಸಿಯಾಗಿದೆ. ನ. 2ರಂದು ಭಾರತ-ಶ್ರೀಲಂಕಾ ಮುಖಾ ಮುಖೀ ಯಾಗಲಿದ್ದು, ಈಗಿನ ಸ್ಥಿತಿಯಂತೆ ಪಾಂಡ್ಯ ಈ ಪಂದ್ಯದಲ್ಲಿ ಆಡುವುದೂ ಅನುಮಾನ. ತಪ್ಪಿದ ಸಮತೋಲನ
ಹಾರ್ದಿಕ್ ಪಾಂಡ್ಯ ಗೈರಿನಿಂದ ಉದ್ಭವಿಸಿರುವ ದೊಡ್ಡ ಸಮಸ್ಯೆ ಯೆಂದರೆ ತಂಡದ ಸಮತೋಲನ ತಪ್ಪಿರುವುದು. ಇವರಂಥ ಇನ್ನೊಬ್ಬ ಆಲ್ರೌಂಡರ್ ಟೀಮ್ ಇಂಡಿಯಾದಲ್ಲಿಲ್ಲ. ಮೀಸಲು ಆಟಗಾರರ ಯಾದಿಯಲ್ಲೂ ಇಲ್ಲ. ಹೀಗಾಗಿ ನ್ಯೂಜಿಲ್ಯಾಂಡ್ ವಿರುದ್ಧ ಸೂರ್ಯ ಕುಮಾರ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರನ್ನು ಸೇರಿಸಿ ಕೊಂಡು ಹನ್ನೊಂದರ ಬಳಗವನ್ನು ರಚಿಸಲಾಯಿತು. ಅಜೇಯ ನ್ಯೂಜಿಲ್ಯಾಂಡ್ ವಿರುದ್ಧವೂ ಗೆದ್ದು ಬಂದ ಭಾರತವೀಗ 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಸೆಮಿಫೈನಲ್ ಪ್ರವೇಶಕ್ಕೇನೂ ತೊಂದರೆ ಇಲ್ಲ. ಆದರೆ ನಾಕೌಟ್ ಸ್ಪರ್ಧೆ ವೇಳೆ ಹಾರ್ದಿಕ್ ಪಾಂಡ್ಯ ಅಗತ್ಯ ಭಾರತಕ್ಕಿದೆ.