Advertisement

IPL : ಕ್ಯಾಪ್ಟನ್‌ ಮಾಡಿದರೆ ಮಾತ್ರ ಮುಂಬೈಗೆ ಬರುತ್ತೇನೆ ಎಂದಿದ್ದ ಹಾರ್ದಿಕ್; ವರದಿ

05:34 PM Dec 16, 2023 | Team Udayavani |

ಮುಂಬಯಿ: ಮುಂಬೈ ಇಂಡಿಯನ್ಸ್‌ ಹಾರ್ದಿಕ್‌ ಪಾಂಡ್ಯಾ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದು, ನೂರಾರು ಮುಂಬೈ ಅಭಿಮಾನಿಗಳಿಗೆ ಶಾಕ್‌ ನೀಡಿದೆ.

Advertisement

ಐದು ಬಾರಿ ಐಪಿಎಲ್‌ ಪಟ್ಟವನ್ನು ಗೆದ್ದುಕೊಟ್ಟ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ಅವರನ್ನು ಕ್ಯಾಪ್ಟನ್‌ ಸ್ಥಾನದಿಂದ ಕೆಳಗಿಳಿಸಿದ್ದುಮುಂಬೈ ಫ್ಯಾನ್ಸ್‌ ಗಳಿಗೆ ಸೇರಿದಂತೆ ಕ್ರಿಕೆಟ್‌ ಪ್ರೇಮಿಗಳಿಗೆ ಅಚ್ಚರಿಯಾಗಿದೆ.

2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯಾ ಕಳೆದ ತಿಂಗಳು ಎರಡು ವರ್ಷಗಳ ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು.

ಮುಂಬೈ ಇಂಡಿಯನ್ಸ್‌ನ ಗ್ಲೋಬಲ್ ಹೆಡ್ ಮಹೇಲಾ ಜಯವರ್ಧನೆ ಹಾರ್ದಿಕ್‌ ಅವರನ್ನು  ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2024 ರ ಋತುವಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಿದೆ ಎಂದು ಶುಕ್ರವಾರ(ಡಿ.15 ರಂದು) ಹೇಳಿದ್ದರು.

ಇದೀಗ ಮುಂಬೈಗೆ ಬರುವ ಮುನ್ನ ಹಾರ್ದಿಕ್‌ ಒಂದು ಕಂಡಿಷನ್‌ ಹಾಕಿಯೇ ತಂಡಕ್ಕೆ ಬಂದಿದ್ದರು ಎಂದು ʼಇಂಡಿಯನ್‌ ಎಕ್ಸ್‌ ಪ್ರೆಸ್‌ʼ ವರದಿ ಮಾಡಿದೆ.

Advertisement

ಗುಜರಾತ್‌ ತಂಡವನ್ನು ಕಳೆದ ಎರಡು ವರ್ಷದಿಂದ ಲೀಡ್‌ ಮಾಡುತ್ತಿದ್ದ ಹಾರ್ದಿಕ್‌ ಪಾಂಡ್ಯಾ ಅವರನ್ನು ಮತ್ತೆ ಮುಂಬೈಗೆ ಕರೆ ತರುವ ಮಾತುಕತೆಯನ್ನು ನಡೆಸಿದಾಗ, ಹಾರ್ದಿಕ್‌ ಪಾಂಡ್ಯಾ ಒಂದು ಕಂಡಿಷನ್‌ ಬಗ್ಗೆ ಮುಂಬೈಗೆ ತಿಳಿಸಿದ್ದರು.

ತನ್ನನ್ನು ತಂಡದ ಕ್ಯಾಪ್ಟನ್‌ ಆಗಿ ನೇಮಿಸಿದರೆ ಮಾತ್ರ ತಂಡಕ್ಕೆ ಮರಳುತ್ತೇನೆ ಎಂದು ಹಾರ್ದಿಕ್‌ ಮುಂಬೈ ಮ್ಯಾನೇಜ್ಮೆಂಟ್‌ ಗೆ ಹೇಳಿದ್ದರು. ಅದರಂತೆ ಈ ಷರತ್ತಿಗೆ ಒಪ್ಪಿಗೆ ನೀಡಿ, ಈ ವಿಚಾರವನ್ನು ರೋಹಿತ್‌ ಅವರ ಗಮನಕ್ಕೆ ತಂದಿತ್ತು. ಆ ಬಳಿಕ ರೋಹಿತ್‌ ಶರ್ಮಾ ಕೂಡ ಹಾರ್ದಿಕ್‌ ಅವರ ನಾಯಕತ್ವದಲ್ಲಿ ಆಡುವುದಾಗಿ ಹೇಳಿದರು ಎಂದು ವರದಿ ತಿಳಿಸಿದೆ.

ಇನ್ನು ಇತ್ತ ಹಾರ್ದಿಕ್‌ ಪಾಂಡ್ಯಾ ಮುಂಬರುವ ಸೀಸನ್‌ ಗೆ ಮುಂಬೈ ತಂಡದ ಕ್ಯಾಪ್ಟನ್‌ ಎನ್ನುವುದನ್ನು ಘೋಷಿಸಿದ ಬಳಿಕ ಮುಂಬೈ ಇಂಡಿಯನ್ಸ್‌ ಲಕ್ಷಾಂತರ ಇನ್ಸ್ಟಗ್ರಾಮ್‌ ಹಿಂಬಾಲಕರನ್ನು ಕಳೆದುಕೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next