Advertisement
ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ಪ್ರಿಂಟಿಂಗ್ ಪ್ರಸ್ ಹೊಂದಿರುವ ಆಶಾ ಮೋಹನ್ ಅವರು ಮಂಗಳವಾರ ಮಧ್ಯಾಹ್ನ ಎಡಮಂಗಲದಲ್ಲಿರುವ ತನ್ನ ಮಾವನ ಮನೆಗೆ ರೈಲಿ ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಸವಣೂರು ಸಮೀಪ ತಲುಪು ತ್ತಿದ್ದಂತೆಯೇ ಅದೇ ಬೋಗಿಯಲ್ಲಿದ್ದ ಯುವಕನೋರ್ವ ಎದ್ದು ಬಂದು ಆಶಾ ಅವರ ಕತ್ತಿಗೆಗೆ ಕೈ ಹಾಕಿ ಹಿಸುಕಿದ್ದಾನೆ.
ಆರೋಪಿ ಸತೀಶ್ ಮಾನಸಿಕ ಅಸ್ವಸ್ಥನಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಆತನನ್ನು 4 ದಿನಗಳ ಹಿಂದೆಯಷ್ಟೇ ಮನೆಗೆ ಕರೆತರಲಾಗಿತ್ತು. ಸೋಮವಾರ ಬೆಳಗ್ಗೆ ಮನೆಯವರ ಕಣ್ಣುತಪ್ಪಿಸಿ ಹೊರ ಹೋಗಿದ್ದ ಆತ ಮನೆಗೆ ಹಿಂದಿರುಗದೆ ಇದ್ದುದರಿಂದ ನಾವು ಆತನನ್ನು ಹುಡುಕುತ್ತಿದ್ದೆವು ಎಂದು ಸತೀಶನ ತಾಯಿ ಆತನ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಕಾಗದಪತ್ರಗಳೊಂದಿಗೆ ಕಡಬ ಠಾಣೆಗೆ ಆಗಮಿಸಿ ಮಾಹಿತಿ ನೀಡಿದ್ದಾರೆ.