Advertisement

Uppunda: ಗಂಡನ ಮನೆಯವರ ಕಿರುಕುಳ; ಪುತ್ರಿ ಆತ್ಮಹತ್ಯೆ

09:35 PM Aug 24, 2024 | Team Udayavani |

ಉಪ್ಪುಂದ: ಗಂಡನ ಮನೆಯವರ ಕಿರುಕುಳದಿಂದ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬ್ರಹ್ಮಾವರ ತಾಲೂಕು ಚಾಂತಾರು ಸದಾಶಿವ ಅವರ ಪುತ್ರಿ ವಿನೋದಾ ಆತ್ಮಹತ್ಯೆ ಮಾಡಿಕೊಂಡವಳು.

ವಿನೋದಾಳನ್ನು ಸುಮಾರು 18 ವರ್ಷಗಳ ಹಿಂದೆ ಹೆರಂಜಾಲು ಗ್ರಾಮದ ಪಾಂಡುರಂಗ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಗಂಡ ಮುಂಬಯಿಯಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು ಅವಳು ತನ್ನ 8 ವರ್ಷದ ಗಂಡು ಮಗುವಿನೊಂದಿಗೆ ಹೆರಂಜಾಲು ಮನೆಯಲ್ಲಿ ಅತ್ತೆ ಹಾಗೂ ಅತ್ತಿಗೆ ಜತೆ ವಾಸವಾಗಿದ್ದರು. ವಿನೋದಾಳಿಗೆ ಗಂಡನ ಮನೆಯವರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next