Advertisement

ಸಮಾನತೆ ಸಾರಿದ ವಚನ ಸಾಹಿತ್ಯ

05:12 PM Apr 05, 2019 | Team Udayavani |

ಹರಪನಹಳ್ಳಿ: ಶತ ಶತಮಾನಗಳಿಂದ ಸಮಾಜದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಕಂದಾಚಾರ, ಅಸಮಾನತೆ ವಿರುದ್ಧ ಧ್ವನಿಮೊಳಗಿಸಿದ ಏಕೈಕ ಸಾಹಿತ್ಯ ಅದು ವಚನ ಸಾಹಿತ್ಯವಾಗಿದೆ ಎಂದು ಹಿರಿಯ ಸಾಹಿತಿ ಎಸ್‌.ಟಿ.ಶಾಂತಗಂಗಾಧರ್‌ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಲ್ಲಿ ಗುರುವಾರ ಕನ್ನಡ
ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಕೆ.ಎಂ.ಗುರುಸಿದ್ದಯ್ಯ ಮತ್ತು ಕೆ.ಎಂ.ಗಿರಿಜಮ್ಮ, ಶಿವಮೊಗ್ಗದ ನಾಗರಾಜಪ್ಪ ಹಾಗೂ ಮೇಘರಾಜ ಜೈನ್‌ ಅವರ ದತ್ತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

12ನೇ ಶತಮಾನದಲ್ಲಿ ಶ್ರಮವಿಲ್ಲದೇ ಹೊಟ್ಟೆ ತುಂಬಿಸಿಕೊಳ್ಳುವ ಸಂಸ್ಕೃತಿಗೆ ತಿಲಾಂಜಲಿ ಹಾಡಿ, ಕಾಯಕ ಸಂಸ್ಕೃತಿಗೆ ಮುನ್ನಡಿ ಬರೆದು ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ. ಬಸವಣ್ಣನವರು ಜಾತಿ ವ್ಯವಸ್ಥೆ ಮತ್ತು ದಯೆಯಿಲ್ಲದ ಧರ್ಮ ವ್ಯವಸ್ಥೆ ವಿರುದ್ಧ ವೈಜ್ಞಾನಿಕವಾಗಿ ಹೋರಾಟ ನಡೆಸುವ ಮೂಲಕ ಸೂತಕ ಧರ್ಮವನ್ನು ಕಿತ್ತೇಸೆದು ಸಮಾಜದಲ್ಲಿದ್ದ ಸೋಮಾರಿತನವನ್ನು
ಹೋಗಲಾಡಿಸಿದರು. ಇತ್ತೀಚೀನ ದಿನಗಳಲ್ಲಿ ಜಾತಿ ಎನ್ನುವ ವಿಷ ಬೀಜವನ್ನು ಕೆಲವರು ವ್ಯವಸ್ಥಿತವಾಗಿ ಬಿತ್ತುವ ಮೂಲಕ ಸಮಾಜವನ್ನು ಒಡೆದಾಳುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅನ್ಯಭಾಷೆಯ ಜೊತೆಗೆ ಮಾತೃ ಭಾಷೆ ಕನ್ನಡವನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿದರೆ ಮಾತ್ರ ಕನ್ನಡ ನಾಡು
ನುಡಿಗೆ ಉತ್ತೇಜನ ನೀಡಿದಂತಾಗುತ್ತದೆ. ಅಲ್ಲದೇ ಕನ್ನಡ ಭಾಷೆ ಉಳಿಯಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ದತ್ತಿದಾನಿ ವೈದ್ಯ ಡಾ| ಎಸ್‌.ಎನ್‌.ಮಹೇಶ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ
ಮಕ್ಕಳು ಮೊಬೈಲ್‌ ದಾಸರಾಗಿದ್ದಾರೆ. ಇದರಿಂದಾಗಿ ಅವರುಗಳ ಸಾಧನೆಗೆ ಅಡ್ಡಿ ಉಂಟಾಗುತ್ತಿದೆ. ಉತ್ತಮ ಸಾಧನೆ ಮಾಡುವುದರಿಂದ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಲು ಮತ್ತು ಸತ್ಪಜೆಗಳಾಗಲು ಸಾಧ್ಯ ಎಂದರು. ಪ್ರಾಚಾರ್ಯ ಎನ್‌.ಎಂ.ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಡಿ.ರಾಮನಮಲಿ, ಹಡಗಲಿ ಕಸಾಪ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ್‌, ದತ್ತಿದಾನಿಗಳಾದ ಎಂ.ಆರ್‌.
ಮಂಜುನಾಥ್‌, ಮಹಾವೀರ್‌ ಭಂಡಾರಿ, ಪ್ರೊ| ಎಂ.ವಿಜಯಕುಮಾರ್‌, ಪ್ರೊ| ಎಂ.ತಿಮ್ಮಪ್ಪ, ಕಸಾಪ ಕೋಶಾಧಿ
ಕಾರಿ ಕೆ.ಉಚ್ಚೆಂಗೆಪ್ಪ, ಕಾರ್ಯದರ್ಶಿ. ಸಿ.ಗಂಗಾಧರ್‌, ಹೇಮಣ್ಣ ಮೋರಿಗೇರಿ, ಎಂ.ಗಂಗಾಪ್ಪ, ದುರುಗೇಶ್‌, ಅಂಜಿನಪ್ಪ,
ಭೀಮಪ್ಪ, ಷಣ್ಮುಖನಗೌಡ, ಮಾಳಿಗಿ ಸುರೇಶ್‌ ಇನ್ನಿತರರಿದ್ದರು

Advertisement

12ನೇ ಶತಮಾನದಲ್ಲಿ ಶ್ರಮವಿಲ್ಲದೇ ಹೊಟ್ಟೆ
ತುಂಬಿಸಿಕೊಳ್ಳುವ ಸಂಸ್ಕೃತಿಗೆ ತಿಲಾಂಜಲಿ ಹಾಡಿ, ಕಾಯಕ
ಸಂಸ್ಕೃತಿಗೆ ಮುನ್ನಡಿ ಬರೆದು ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ.
ಬಸವಣ್ಣನವರು ಜಾತಿ ವ್ಯವಸ್ಥೆ ಮತ್ತು ದಯೆಯಿಲ್ಲದ ಧರ್ಮ
ವ್ಯವಸ್ಥೆ ವಿರುದ್ಧ ವೈಜ್ಞಾನಿಕವಾಗಿ ಹೋರಾಟ ನಡೆಸುವ
ಮೂಲಕ ಸೂತಕ ಧರ್ಮವನ್ನು ಕಿತ್ತೇಸೆದು ಸಮಾಜದಲ್ಲಿದ್ದ
ಸೋಮಾರಿತನವನ್ನು ಹೋಗಲಾಡಿಸಿದರು. ಇತ್ತೀಚೀನ
ದಿನಗಳಲ್ಲಿ ಜಾತಿ ಎನ್ನುವ ವಿಷ ಬೀಜವನ್ನು ಕೆಲವರು
ವ್ಯವಸ್ಥಿತವಾಗಿ ಬಿತ್ತುವ ಮೂಲಕ ಸಮಾಜವನ್ನು ಒಡೆದಾಳುವ ಕೆಲಸ ಮಾಡುತ್ತಿದ್ದಾರೆ.
ಎಸ್‌.ಟಿ.ಶಾಂತಗಂಗಾಧರ್‌,
ಹಿರಿಯ ಸಾಹಿತಿ.

Advertisement

Udayavani is now on Telegram. Click here to join our channel and stay updated with the latest news.

Next