Advertisement

ಪೊಲೀಸರಿಗೆ ಚ್ಯವನಪ್ರಾಶ ವಿತರಣೆ

06:35 PM May 13, 2020 | Naveen |

ಹರಪನಹಳ್ಳಿ: ತಾಲೂಕಿನ ಹಲುವಾಗಲು ಪೊಲೀಸ್‌ ಸಿಬ್ಬಂದಿಗೆ ಬಿಜೆಪಿ ಮುಖಂಡ ಕಲ್ಲೇರ ಬಸವರಾಜ್‌ ಚ್ಯವನಪ್ರಾಶ ವಿತರಿಸಿದರು. ಲಾಕ್‌ಡೌನ್‌ ಸಂದರ್ಭ ದಲ್ಲಿಯೂ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿಗೆ ರೋಗ ನಿರೋಧಕ ಶಕ್ತಿ ಹೊಂದಿರುವ ಉತ್ತಮ ಗುಣಮಟ್ಟದ ಚ್ಯವನಪ್ರಾಶವನ್ನು ಹಲುವಾಗಲು ಠಾಣೆ ಸಬ್‌ಇನ್ಸ್‌ಪೆಕ್ಟರ್‌ ಕೃಷ್ಣಪ್ಪ 35 ಸಿಬ್ಬಂದಿಗೆ ವಿತರಿಸಿದರು.

Advertisement

ಕಳೆದ ವಾರ ನಾನು ಬೆಳೆದ 100 ಕ್ವಿಂಟಲ್‌ ಜೋಳವನ್ನು ರೈತರಿಗೆ ಉಚಿತವಾಗಿ ಹಂಚಿದ್ದೆ. ಜನರ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ ಚ್ಯವನಪ್ರಾಶ ವಿತರಣೆ ಮಾಡುವ ಮೂಲಕ ನನ್ನ ಅಳಿಲು ಸೇವೆ ಮಾಡಿದ್ದೇನೆ ಎಂದು ಕಲ್ಲೇರ ಬಸವರಾಜ್‌ ತಿಳಿಸಿದ್ದಾರೆ. ಅರಸನಾಳ ಬಸವರಾಜ್‌ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next