Advertisement

ಆ.15ರ ವರೆಗೆ ರಜೆ ಇಲ್ಲದೆ ಅಂಚೆ ಕಚೇರಿಗಳಿಗೆ ಕೆಲಸ: ತ್ರಿವರ್ಣ ಧ್ವಜ ಹಾರಿಸಲು ಸಾಥ್‌

08:14 PM Aug 07, 2022 | Team Udayavani |

ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಕಳೆದಿರುವ ಈ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರವು “ಹರ್‌ ಘರ್‌ ತಿರಂಗಾ’ ಅಭಿಯಾನವನ್ನು ಹಮ್ಮಿಕೊಂಡಿದೆ. ದೇಶದ ಎಲ್ಲ ಮನೆ, ಕಟ್ಟಡಗಳ ಮೇಲೆ ತ್ರಿವರ್ಣ ಹಾರಿಸುವ ಉದ್ದೇಶ ಹೊಂದಿರುವ ಕೇಂದ್ರಕ್ಕೆ ಅಂಚೆ ಕಚೇರಿಗಳೂ ಸಾಥ್‌ ಕೊಟ್ಟಿದ್ದು, ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡಲಾರಂಭಿಸಿವೆ.

Advertisement

ಅದೇ ಹಿನ್ನೆಲೆ, ಆ.15ರವರೆಗೆ ಸರ್ಕಾರಿ ರಜೆ ಇದ್ದರೂ ಬಾಗಿಲು ಮುಚ್ಚದಿರಲು ಅಂಚೆ ಕಚೇರಿಗಳು ನಿರ್ಧರಿಸಿವೆ.

ಸರ್ಕಾರಿ ರಜಾ ದಿನಗಳಾಗಿರುವ ಆ.9 ಮತ್ತು ಆ.14ರಂದು ಅಂಚೆ ಕಚೇರಿಗಳ ಕನಿಷ್ಠ ಒಂದು ಕೌಂಟರ್‌ ಅಲ್ಲಾದರೂ ತ್ರಿವರ್ಣ ಧ್ವಜ ಮಾರಾಟ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಮೂರು ಗಾತ್ರದ ಧ್ವಜಗಳನ್ನು 25 ರೂ., 18 ರೂ. ಮತ್ತು 9 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಕೈದಿಗಳ ಬಿಡುಗಡೆ:
ಬಿಹಾರ, ಮಹಾರಾಷ್ಟ್ರ ಸರ್ಕಾರಗಳು ಸನ್ನಡತೆಯಿಂದ ನಡೆದುಕೊಂಡ ಕೈದಿಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿವೆ. ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿದ ಮಾರ್ಗಸೂಚಿಗೆ ಅನ್ವಯವಾಗಿ ಈ ಕ್ರಮ ನಡೆಯಲಿದೆ.

Advertisement

ಯೋಧರ ರ‍್ಯಾಲಿ:
ಹರ್‌ ಘರ್‌ ತಿರಂಗಾ ಬಗ್ಗೆ ಜಾಗೃತಿ ಮೂಡಿಸಲು ಅಸ್ಸಾಂನಲ್ಲಿ ಭಾನುವಾರ ಕೇಂದ್ರೀಯ ಮೀಸಲು ಪಡೆಯ ಯೋಧರು ಮೆರವಣಿಗೆ ನಡೆಸಿದರು. 150ಕ್ಕೂ ಅಧಿಕ ಯೋಧರು ತ್ರಿವರ್ಣ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next