Advertisement

ಫಡ್ನವೀಸ್ ರವರು ಮತ್ತೊಮ್ಮೆ ಸಿಎಂ ಆದರೆ ಸಂತೋಷ : ಸದಾನಂದ ತಾನಾವಡೆ

05:05 PM Jun 24, 2022 | Team Udayavani |

ಪಣಜಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ ಸಿ ಪಿಯೊಂದಿಗಿನ ಮೈತ್ರಿಯಿಂದ ಶಿವಸೇನೆ ಕಾರ್ಯಕರ್ತರು ಬೇಸರಗೊಂಡಿದ್ದಾರೆ ಎಂದು ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಹೇಳಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮತ್ತು ಎನ್ ಸಿ ಪಿ ಜತೆಗಿನ ಮೈತ್ರಿಗೆ ಶಿವಸೇನೆ ಕಾರ್ಯಕರ್ತರು ಒಪ್ಪಿಗೆ ನೀಡಿಲ್ಲ. ಇಂತಹ ಮೈತ್ರಿಯಿಂದ ಕಾರ್ಯಕರ್ತರು ಸಿಟ್ಟಿಗೆದ್ದಿದ್ದಾರೆ. ಮಹಾರಾಷ್ಟ್ರದ ಜನರು ಉತ್ತಮ ಸರ್ಕಾರವನ್ನು ಪಡೆಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಇದನ್ನೂ ಓದಿ : ಮಹಾರಾಷ್ಟ್ರ ಬಿಕ್ಕಟ್ಟು-ಶಿಂಧೆ ಗುಂಪಿಗೆ ಶಾಸಕರ ಸೇರ್ಪಡೆ, ಶಿವಸೇನಾಗೆ ಭಾರೀ ಮುಖಭಂಗ

ದೇವೇಂದ್ರ ಫಡ್ನವೀಸ್ ರವರು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ನಮಗೆ ಸಂತೋಷವಾಗುತ್ತದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜನಾದೇಶ ಪಡೆದಿತ್ತು ಎಂದು ತಾನಾವಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next