Advertisement
13 ವಾರ್ಡುಗಳಿಗೂ ಮೀಸಲಾತಿ ಪ್ರಕಟ: ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 13 ವಾರ್ಡುಗಳಿಗೂ ಈಗಾಗಲೇ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಮೀಸಲಾತಿ ಪಟ್ಟಿ ಅನ್ವಯ 1ನೇ ವಾರ್ಡು – ಹಿಂದುಳಿದ ವರ್ಗ ಮಹಿಳೆ, 2ನೇ ವಾರ್ಡು-ಸಾಮಾನ್ಯ, 3ನೇ – ಸಾಮಾನ್ಯ, 4ನೇ -ಸಾಮಾನ್ಯ ಮಹಿಳೆ, 5ನೇ – ಪ.ಜಾತಿ ಮಹಿಳೆ, 6ನೇ – ಪರಿಶಿಷ್ಟ ಪಂಗಡ, 7ನೇ – ಸಾಮಾನ್ಯ ಮಹಿಳೆ, 8ನೇ – ಸಾಮಾನ್ಯ, 9ನೇ – ಸಾಮಾನ್ಯ, 10ನೇ – ಹಿಂದುಳಿದ ವರ್ಗ, 11ನೇ – ಪ.ಜಾತಿ, 12ನೇ – ಸಾಮಾನ್ಯ ಮಹಿಳೆ ಮತ್ತು 13ನೇ – ಪ.ಜಾತಿಗೆ ಮೀಸಲಾಗಿವೆ. 13 ವಾರ್ಡುಗಳ ಪೈಕಿ ಸಾಮಾನ್ಯ ವರ್ಗಕ್ಕೆ 4, ಸಾಮಾನ್ಯ ಮಹಿಳೆಗೆ 3, ಪ.ಜಾತಿಗೆ 2, ಪ.ಜಾತಿ ಮಹಿಳೆಗೆ-1, ಪ.ಪಂಗಡ 1, ಹಿಂದುಳಿದ ವರ್ಗ ಮಹಿಳೆ 1 ಮತ್ತು ಹಿಂದುಳಿದ ವರ್ಗಗಳಿಗೆ 1 ಸ್ಥಾನ ದೊರೆತಿದೆ.
Related Articles
Advertisement
ಮೈತ್ರಿಗೆ ಕೊಟ್ಟ ಗುನ್ನ ಜೆಡಿಎಸ್ನ ನಡೆ ವರದಾನವೋ, ಶಾಪವೋ: ಕುಟುಂಬ ರಾಜಕಾರಣಕ್ಕೆ ಪ್ರಖ್ಯಾತಿ ಪಡೆದಿದ್ದ ಹನೂರು ಕ್ಷೇತ್ರದಲ್ಲಿ ಪಕ್ಷಗಳ ನಡುವಿನ ಹೋರಾಟಕ್ಕಿಂತ ಕುಟುಂಬಗಳ ನಡುವಿನ ಚುನಾವಣೆಯೇ ಹೆಚ್ಚಿನ ಸದ್ದು ಮಾಡುತಿತ್ತು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬಳಿಕ ಜೆಡಿಎಸ್ ಕಳೆಗುಂದಿತ್ತು. ಈ ವೇಳೆಗೆ 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಮಂಜುನಾಥ್ಗೆ ಹನೂರು ಪಟ್ಟಣದಲ್ಲಿ ಬಿಎಸ್ಪಿ ಜೊತೆಗಿನ ಮೈತ್ರಿಯಿಂದಲೋ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆನ್ನುವ ಹಂಬಲದಿಂದಲೋ ಅಥವಾ ಕುಟುಂಬ ರಾಜಕಾರಣದ ವಿರುದ್ಧವಾಗಿಯೋ ಮತ ಚಲಾಯಿಸಿ ಜೆಡಿಎಸ್ ನೀಡಿದ್ದರು.
ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ನ ಮಂಜುನಾಥ್ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಧರ್ಮ ಪಾಲನೆ ಮಾಡಿಲ್ಲ ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದ್ದು ಅವರ ನಡೆಯ ವಿರುದ್ಧ ಪಟ್ಟಣವಾಸಿಗಳು ಮತ ಚಲಾಯಿಸುತ್ತಾರೋ ಅಥವಾ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎನ್ನುವ ಕಾರಣದಿಂದ ಅವರ ಪರ ಒಂದಷ್ಟು ಮತಗಳು ಚಲಾವಣೆಯಾಗಿ ವರದಾನವಾಗುತ್ತದೆಯೋ ಎಂಬ ಅಂಶ ಚುನಾವಣೆಯಲ್ಲಿ ಚರ್ಚಾ ವಸ್ತುವಾಗಿದೆ.
ಪ್ರತಿಷ್ಠೆಯ ಕಣ: ಒಟ್ಟಾರೆ ಪಟ್ಟಣ ಪಂಚಾಯಿತಿ ಚುನಾವಣೆ ಕಳೆದ 11 ವರ್ಷದಿಂದ ಅಧಿಕಾರದಲ್ಲಿರುವ ಶಾಸಕ ನರೇಂದ್ರ ರಾಜುಗೌಡ, ತಮ್ಮ ಕುಟುಂಬದ ಪ್ರಾಬಲ್ಯ ಉಳಿಸಿಕೊಳ್ಳುವ ತವಕದಲ್ಲಿರುವ ಪರಿಮಳಾ ನಾಗಪ್ಪ ಮತ್ತು ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ತವಕದಲ್ಲಿರುವ ಮಂಜುನಾಥ್ ಸೇರಿದಂತೆ 3 ಪಕ್ಷದರವರಿಗೂ ಪ್ರತಿಷ್ಠೆಯ ಕಣವಾಗಿದೆ.
* ವಿನೋದ್ ಎನ್ ಗೌಡ