Advertisement

ಗೃಹ ಸಚಿವ ಅಮಿತ್‌ ಶಾ ಆಗಮನ ಹಿನ್ನೆಲೆ: ಹನುಮಗಿರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ

11:36 PM Feb 09, 2023 | Team Udayavani |

ಈಶ್ವರಮಂಗಲ: ಹನುಮಗಿರಿ ಕ್ಷೇತ್ರದ ಅಮರಗಿರಿಯ ಲೋಕಾರ್ಪಣೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮನದ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳ ಸಭೆ ಹನುಮ ಗಿರಿಯಲ್ಲಿ ಗುರುವಾರ ನಡೆಯಿತು.

Advertisement

ಜಿಲ್ಲೆಯ ಅಧಿಕಾರಿಗಳು ಇಲ್ಲಿ ಮಾಡಿರುವ ವ್ಯವಸ್ಥೆಗಳು, ವಾಹನಗಳ ಸಂಚಾರಕ್ಕೆ ಮಾಡಲಾಗಿರುವ ಬದಲಿ ವ್ಯವಸ್ಥೆ ಸಹಿತ ಸಮಗ್ರ ಮಾಹಿತಿಯನ್ನು ನೀಡಿದರು.

ಅಧಿಕಾರಿಗಳು ಈಶ್ವರಮಂಗಲದ ಹೆಲಿಪ್ಯಾಡ್‌, ಹನುಮಗಿರಿ ಪಂಚಮುಖೀ ಆಂಜನೇಯ ಕ್ಷೇತ್ರಕ್ಕೆ ಹಾಗೂ ಅಮರಗಿರಿಯ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಗಣ್ಯ ವ್ಯಕ್ತಿಗಳ ರಕ್ಷಣ ಕಮಾಂಡರ್‌ ಹಜೇರಿ ಲಾಲ್, ವಿಂಗ್‌ ಕ್ರಾಫ್ಟ್ ಕಮಾಂಡರ್‌ ಗಳಾದ ಗೌರವ ಸಿಂಗ್‌, ಕಮಲೇಶ್‌ ಸಿಂಗ್‌, ಸಹಾಯಕ ಕಮಾಂಡರ್‌ ವಿಭಾಶ್‌ ರಾಯ್, ಗುಪ್ತಚಾರ ಸಂಸ್ಥೆಯ ಷಾಜಿ ಎಂ.ವಿ., ಅಡಿಶನಲ್‌ ಎಸ್‌ಪಿ ಧರ್ಣಪ್ಪ, ಎಸಿ ಗಿರೀಶ್‌ ನಂದನ್‌, ಡಿಎಸ್ಪಿ ಡಾ| ಗಾನ ಪಿ. ಕುಮಾರ್‌, ಡಿವೈಎಸ್‌ಪಿ ವೀರಯ್ಯ ಹಿರೇಮs… ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next