Advertisement

ಕಾಡ್ಲೂರಲ್ಲಿ 20ರಿಂದ ಶ್ರೀ ಹನುಮದ್‌ವ್ರತ

03:27 PM Dec 18, 2018 | |

ರಾಯಚೂರು: ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ವನವಾಸಿ ಶ್ರೀ ರಾಮದೇವರ ಹಾಗೂ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಡಿ.20ರಿಂದ 22ರವರೆಗೆ ಶ್ರೀ ಹನುಮದ್‌ವ್ರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ತನ್ನಿಮಿತ್ತ ಡಿ.20ರಂದು ಶ್ರೀ ರಾಮದೇವರಿಗೆ, ಪ್ರಾಣದೇವರಿಗೆ ವಿಶೇಷ ಪೂಜೆ, ಶ್ರೀ ಹನುಮದ್‌ವ್ರತ ಕಥೆ, ಅಲಂಕಾರ, ನೈವೇದ್ಯ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. 21ರಂದು ಬೆಳಗ್ಗೆ 9 ಗಂಟೆಗೆ ಶ್ರೀ ತಂಬಿಹಳ್ಳಿ ಮಾಧವತೀರ್ಥ ಮಠದ ಪೀಠಾಧಿಪತಿ ಶ್ರೀ ವಿದ್ಯಾಸಿಂಧು ಮಾಧವ ತೀರ್ಥರ ಭವ್ಯ ಮೆರವಣಿಗೆ, ಪಾದಪೂಜೆ, ಶ್ರೀ
ಪಾದಂಗಳವರಿಂದ ನದಿಯಲ್ಲಿ ದಂಡಕಾಷ್ಟ ಸ್ನಾನ, ರಾಮದೇವರಿಗೆ, ಪ್ರಾಣದೇವರಿಗೆ ಮಧು ಅಭಿಷೇಕ, ಶ್ರೀಗಳವರಿಂದ ಸಂಸ್ಥಾನ ಪೂಜೆ, ಆಶೀರ್ವಚನ ಕಾರ್ಯಕ್ರಮ ಜರುಗಲಿದೆ. ರಾತ್ರಿ ನದಿಯಲ್ಲಿ ದೀಪೋತ್ಸವ, ತೆಪ್ಪೋತ್ಸವ ನಡೆಯಲಿದೆ.

22ರಂದು ಹುಣ್ಣಿಮೆ ಅಂಗವಾಗಿ ಶ್ರೀರಾಮದೇವರಿಗೆ ಹಾಗೂ ಪ್ರಾಣದೇವರಿಗೆ ವಿಶೇಷ ಪೂಜೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕಾಡ್ಲೂರು ಸಂಸ್ಥಾನದ ಶ್ರೀ ರಂಗಾರಾವ್‌ ದೇಸಾಯಿ ಹಾಗೂ ಗ್ರಾಮಸ್ಥರು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next