Advertisement

ನೇಣು ಬಿಗಿಯೋ ಬದಲು ಬೇರೆ ಮಾರ್ಗ ಸಾಧ್ಯವೇ?

10:30 AM Oct 07, 2017 | Team Udayavani |

ಹೊಸದಿಲ್ಲಿ: ಮರಣದಂಡನೆ ಶಿಕ್ಷೆಗೆ ಗುರಿಯಾದ ಅಪರಾಧಿಗಳಿಗೆ ನೇಣು ಬಿಗಿಯುವ ಬದಲು ಕಾನೂನು ರೀತ್ಯ ಬೇರೆ ಯಾವುದಾದರೂ ಮಾರ್ಗದಲ್ಲಿ ಶಿಕ್ಷೆ ವಿಧಿಸಲು ಸಾಧ್ಯವೇ? ಹೀಗೆಂದು ಕೇಂದ್ರ ಸರಕಾರವನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ. ಈಗ ಚಾಲ್ತಿಯಲ್ಲಿರುವ ವಿಧಾನದ ಬದಲು ಕಾನೂನು ಬದ್ಧವಾಗಿಯೂ, ವೈಜ್ಞಾನಿಕವಾಗಿ ಸಾಧ್ಯವಾಗಬಲ್ಲ, ಹೆಚ್ಚು ನೋವು ಆಗದ ರೀತಿ ಬೇರೆ ಮಾರ್ಗದಲ್ಲಿ ಶಿಕ್ಷೆ ನೀಡಲು ಸಾಧ್ಯವೇ ಎನ್ನುವ ಬಗ್ಗೆ 3 ವಾರಗಳ‌ ಒಳಗೆ  ಉತ್ತರಿಸುವಂತೆ ನಿರ್ದೇಶಿಸಿದೆ. ಅಲ್ಲದೆ, ನ್ಯಾಯಾಂಗ ಆಯೋಗದ 187ರ ವರದಿಯಲ್ಲೇ ಈಗ ಜಾರಿಯಲ್ಲಿರುವ ಪದ್ಧತಿ ರದ್ದುಗೊಳಿಸುವ ಬಗ್ಗೆ ತಿಳಿಸಲಾಗಿದೆ ಎಂದೂ ಹೇಳಿದೆ. ಈ ಬಗ್ಗೆ ವಕೀಲ ರಿಷಿ ಮಲ್ಹೋತ್ರ ಅವರು ಪಿಐಎಲ್‌ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next