Advertisement

Karkala ಕಾರ್ಮಿಕ ಮಹಿಳೆಯ ಕೈ ಚೀಲ ಕಳ್ಳತನ

09:33 PM Sep 12, 2023 | Team Udayavani |

ಕಾರ್ಕಳ: ಕಾರ್ಮಿಕ ಮಹಿಳೆ ಕಾಲ್ನಡಿಗೆಯಲ್ಲಿ ತೆರಳುತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಾತ ಮೊಬೈಲ್‌ ಹಾಗೂ ನಗದು ಹಣವಿದ್ದ ಕೈ ಚೀಲ ಕಸಿದುಕೊಂಡು ಪರಾರಿಯಾದ ಘಟನೆ ಬಂಗ್ಲೆಗುಡ್ಡೆಯಲ್ಲಿ ಸೆ. 11ರ ರಾತ್ರಿ ನಡೆದಿದೆ.

Advertisement

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಪಕೀರಮ್ಮ (40) ಅವರು ಸ್ನೇಹಿತೆ ವೀಣಾ ಅವರ ಜತೆಗೆ ಕಾಬೆಟ್ಟುವಿನಲ್ಲಿರುವ ತನ್ನ ಮನೆಗೆ ರಾತ್ರಿ 8.40ರ ಹೊತ್ತಿಗೆ ನಡೆದುಕೊಂಡು ಹೋಗುತ್ತಿದ್ದರು. ಬಂಗ್ಲೆಗುಡ್ಡೆ ಬಳಿ ಹಿಂದಿನಿಂದ ಕಪ್ಪು ಬಣ್ಣದ ಸ್ಕೂಟಿಯಲ್ಲಿ ಬಂದ ಕಳ್ಳ ಮಹಿಳೆಯ ಕೈಚೀಲ ಕಸಿದುಕೊಂಡು ಪರಾರಿಯಾಗಿದ್ದಾನೆ.

ಕೈಚೀಲದಲ್ಲಿ 15 ಸಾವಿರ ರೂ. ಬೆಲೆಯ ಮೊಬೈಲ್‌, 5 ಸಾವಿರ ರೂ. ನಗದು ಇತ್ತು. ಭಾರತ್‌ ಫೈನಾನ್ಸ್‌ ಸಿಬಂದಿಗೆ ಅಡುಗೆ ಸಿದ್ಧಪಡಿಸುವ ಮಹಿಳೆ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಸ್ಕೂಟಿಯಲ್ಲಿದ್ದಾತ ಕಪ್ಪು ಬಣ್ಣದ ಟಿ-ಶರ್ಟ್‌ ಧರಿಸಿದ್ದ. ಬಂಗ್ಲೆಗುಡ್ಡೆ ಕಡೆಗೆ ಸ್ಕೂಟಿ ತೆರಳಿ ನಕ್ರೆ ಜಂಕ್ಷನ್‌ ಕಡೆಗೆ ಹೋಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next