Advertisement

Hanagal Case; ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

02:59 PM Jan 15, 2024 | Team Udayavani |

ಹಾವೇರಿ: ಹಾನಗಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳೆಲ್ಲರೂ ಅರೆಸ್ಟ್ ಆಗಿದಾರೆ. ತನಿಖೆ ನಡೆಯುತ್ತಿದೆ. ಯಾರನ್ನೂ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡುವುದಿಲ್ಲ. ಯಾವುದೇ ಧರ್ಮಕ್ಕೆ ಸೇರಿದವರಾಗಲಿ ಜಾತಿಗೆ ಸೇರಿದವರು ಕ್ರಮ ಕೈಗೊಳ್ಳುತ್ತೇವೆ. ಈ ಪ್ರಕರಣದಲ್ಲಿ ಯಾರೇ ಕಾನೂನು ಕೈಗೆ ತಗೊಂಡರೂ ಶಿಕ್ಷೆ ಕೊಡಿಸುತ್ತೇವೆ. ಯಾರನ್ನೂ ಇದರಲ್ಲಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಸಂತ್ರಸ್ತೆ ಸಂಬಂಧಿಕರನ್ನು ಭೇಟಿಯಾದ ಅವರು ಮಾತನಾಡಿ, ಸಂತ್ರಸ್ಥೆ ಕಡೆಯವರು ಈಗ ತಾನೆ ಅರ್ಜಿ ಕೊಟ್ಟಿದಾರೆ. ಈಗ ತನಿಖೆ ಮಾಡಿದವರೂ ಪೊಲೀಸರೇ ಎಸ್ ಐಟಿಯವರೂ ಪೊಲೀಸರೆ. ಪ್ರಾಥಮಿಕ ವರದಿ ಬರಲಿ ಯಾವುದನ್ನೂ ಮುಚ್ಚಿ ಹಾಕೋ ಪ್ರಶ್ನೆಯೇ ಇಲ್ಲ ಎಂದರು.

ಅನಂತ್ ಕುಮಾರ್ ಹೇಳಿಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮರ್ಥನೆ ವಿಚಾರಕ್ಕೆ ಮಾತನಾಡಿ, ಅವರು ರಾಜಕೀಯವಾಗಿ ಆರೋಪ ಮಾಡುತ್ತಾರೆ ಅನಂತ ಕುಮಾರ್ ಇಷ್ಟು ದಿನ ನಾಪತ್ತೆಯಾಗಿದ್ದರು. ಅವರು ಕ್ಷೇತ್ರಕ್ಕೆ ಏನಾದರೂ  ಮಾಡಿದ್ದಾರಾ? ಬಡವರ ಕಷ್ಟ ಕೇಳಿದ್ದಾರಾ? ಪ್ರಹ್ಲಾದ್ ಜೋಶಿಗೂ ಸಂಸ್ಕೃತಿ ಇಲ್ಲವೆಂದಾಯಿತು. ಸಂಸ್ಕೃತಿ ಅಂದರೆ ಮನುಷ್ಯತ್ವ, ಮನುಷ್ಯತ್ವ ಮುಖ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next