Advertisement

ನಾಳೆ ಹಂಪಿ ವಿವಿ 27ನೇ ನುಡಿಹಬ್ಬ

12:30 AM Jan 29, 2019 | |

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 27ನೇ ಘಟಿಕೋತ್ಸವ ‘ನುಡಿಹಬ್ಬ’ ಜ.30ರಂದು ನಡೆಯಲಿದ್ದು, ವಿಶ್ವವಿದ್ಯಾಲಯದಿಂದ ನೀಡುವ ನಾಡೋಜ ಗೌರವ ಪದವಿಗೆ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಡಾ| ಮನು ಬಳಿಗಾರ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ವಿಶ್ವವಿದ್ಯಾಲಯದ ಕುಲಪತಿ ಡಾ| ಮಲ್ಲಿಕಾ ಘಂಟಿ ಅವರು ಸುದ್ದಿಗೋಷ್ಠಿಯಲ್ಲಿ ನುಡಿಹಬ್ಬದ ಕುರಿತು ವಿವರಣೆ ನೀಡಿ, ಜ.30ರಂದು ಸಂಜೆ 5.30ಕ್ಕೆ ಕುಲಾಧಿಪತಿ ಹಾಗೂ ರಾಜ್ಯಪಾಲರಾಗಿರುವ ವಿ.ಆರ್‌.ವಾಲಾ ಅವರು, ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ ಎಂದರು. ಡಾ|ಮನು ಬಳಿಗಾರ ಅವರು ಈ ಬಾರಿಯ ನಾಡೋಜ ಗೌರವ ಪದವಿ ಪಡೆಯಲಿದ್ದು, ಇದುವರೆಗೆ 85 ಜನ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಕರ್ನಾಟಕ ಸರ್ಕಾರದ ವಿವಿಧ ಹಂತಗಳಲ್ಲಿ ಅಧಿಕಾರಿಯಾಗಿ, ‘ಪೈಲ್ವಾನ್‌ ಮಲ್ಲಪ್ಪ’ ಕೃತಿ ರಚಿಸಿ ಸಂಚಲನ ಸೃಷ್ಟಿಸಿದ ಅವರು ರಾಜ್ಯ ಸರ್ಕಾರದಿಂದ ಅನೇಕ ಪ್ರಶಸ್ತಿ ಪಡೆದಿದ್ದಾರೆ. ಆಯ್ಕೆ ಸಮಿತಿ ಕಳಿಸಿದ ಹೆಸರುಗಳ ಪೈಕಿ ರಾಜ್ಯಪಾಲರು ಇವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಸಮಿತಿಯಲ್ಲಿ ನಮ್ಮ ಹಸ್ತಕ್ಷೇಪ ಇರುವುದಿಲ್ಲ. ಹೀಗಾಗಿ ಆಯ್ಕೆಯಲ್ಲಿ ರಾಜ್ಯಪಾಲರ ತೀರ್ಮಾನವೇ ಅಂತಿಮ ಎಂದರು. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಡಿ.ಲಿಟ್ ಹಾಗೂ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಿದ್ದಾರೆ. ಇಸ್ರೋದ ವಿಕ್ರಮ್‌ ಸಾರಾಭಾಯಿ, ಎ.ಎಸ್‌. ಕಿರಣಕುಮಾರ್‌ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next