Advertisement

ಶೂಲೇಸ್ ಕಟ್ಟಲಾಗದವರು ಧೋನಿ ಬಗ್ಗೆ ಮಾತನಾಡುತ್ತಾರೆ !

09:51 AM Oct 27, 2019 | keerthan |

ಹೊಸದಿಲ್ಲಿ: ಮಹೇಂದ್ರ ಸಿಂಗ್ ಧೋನಿ ಯಾವಾಗ ನಿವೃತ್ತಿ ಪಡೆಯುತ್ತಾರೆ ಎನ್ನುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದೊಂದು ವಿಷಯದ ಬಗ್ಗೆ ಅನೇಕರು ಪದೇ ಪದೇ ಹೇಳಿಕೆ ನೀಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿರುತ್ತಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಕೋಚ್ ರವಿಶಾಸ್ತ್ರಿ, ಧೋನಿ ಬಗ್ಗೆ ಮಾತನಾಡುವ ಅರ್ಧದಷ್ಟು ಮಂದಿಗೆ ಸರಿಯಾಗಿ ಶೂ ಲೇಸ್ ಕಟ್ಟಲು ಬರುವುದಿಲ್ಲ ಎಂದಿದ್ದಾರೆ.

Advertisement

ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ಶಾಸ್ತ್ರಿ, ಮಹೇಂದ್ರ ಸಿಂಗ್ ಧೋನಿ ದೇಶಕ್ಕಾಗಿ ಏನು ಮಾಡಿದ್ದಾರ ಎಂದು ಎಲ್ಲರಿಗೂ ಗೊತ್ತು. ಆದರೂ ಜನರು ಧೋನಿಯನ್ನು ಮೈದಾನದಿಂದ ಹೊರಗೆ ಕಾಣಲು ಅವಸರ ಮಾಡುತ್ತಾರೆ. ಧೋನಿ ನಿವೃತ್ತಿಯಾಗುತ್ತಾರೆಂದು ಧೋನಿಗೂ ಗೊತ್ತು, ಜನರಿಗೂ ಗೊತ್ತು ಎಂದರು.

ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಸಮಯದಲ್ಲೂ ಧೋನಿಗೆ ಯಾರೂ ಹೇಳಿರಲಿಲ್ಲ. ಅವರಿಗೆ ಗೊತ್ತು ಯಾವಾಗ ನಿವೃತ್ತಿಯಾಗಬೇಕೆಂದು. ವೃದ್ಧಿಮಾನ್ ಸಾಹಾ ಯಾವಾಗ ತನ್ನ ಜಾಗ ತುಂಬಲು ಸಿದ್ದವಾಗಿದರೊ ಆಗ ಧೋನಿ ನಿವೃತ್ತಿ ಪಡೆದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next