Advertisement
ಕಳೆದ ಬಾರಿ ಮುಂಗಾರು ಪ್ರವೇಶಿಸಿದ ಬಳಿಕ ಬಿರುಸುಗೊಂಡಿತ್ತು. ಆದರೆ, ಈ ಬಾರಿ ದುರ್ಬಲಗೊಂಡಿದೆ. ಸಾಮಾ ನ್ಯವಾಗಿ ಮುಂಗಾರು ಪ್ರವೇಶ ಪಡೆದು ಒಂದು ವಾರ ಕಾಲ ದಿನವಿಡೀ ಜಿಟಿ ಜಿಟಿ ಮಳೆ ಸುರಿಯುತ್ತದೆ. ಆದರೆ, ಈ ಬಾರಿಯ ಹವಾಮಾನವೇ ಬದಲಾಗಿದೆ.
Related Articles
ಸಾಮಾನ್ಯವಾಗಿ ಜೂನ್ ಮೊದಲ ವಾರವೇ ಮಳೆಯಾಗಿ, ಕರಾವಳಿ ಭಾಗದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗುತ್ತದೆ. ಈ ಬಾರಿ ಜೂನ್ ಮೊದಲ ವಾರ ಕರಾವಳಿಗೆ ಮುಂಗಾರು ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿತ್ತು.
Advertisement
ಆದರೆ ಜೂ. 9ರಂದು ಕೇರಳ ಕರಾವಳಿಗೆ ಮುಂಗಾರು ಬಂದರೂ, “ವಾಯು’ ಎಂಬ ಹೆಸರಿನ ಚಂಡಮಾರುತದ ಪರಿಣಾಮ ರಾಜ್ಯ ಕರಾವಳಿಗೆ ಒಂದು ವಾರಗಳ ಬಳಿಕ ಜೂ. 14ರಂದು ಮುಂಗಾರು ಆಗಮನವಾಯಿತು.ಈ ಹಿಂದೆಯೇ ಪೂರ್ವ ಮುಂಗಾರು ಮಳೆ ಕರಾವಳಿಯಲ್ಲಿ ಕ್ಷೀಣಿಸಿದ್ದ ಕಾರಣದಿಂದ ಮುಂಗಾರು ಉತ್ತಮವಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಮುಂಗಾರು ಪ್ರವೇಶಗೊಂಡು ಮೂರ್ನಾಲ್ಕು ದಿನ ಗಳಾದರೂ, ಮಂಗಳೂರು ಸಹಿತ ದ.ಕ. ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ.
ಬೆಳಗ್ಗಿನ ವೇಳೆ ಮೋಡ ಕವಿದು ಬಿಸಿಲಿನ ವಾತಾವರಣ ಇರುತ್ತದೆ. ಕೆಲವೊಮ್ಮೆ ಅಲ್ಲಲ್ಲಿ ಹಗುರದಿಂದ ಕೂಡಿದ ಮಳೆಯಾದರೂ ಬಿರುಸು ಪಡೆಯುತ್ತಿಲ್ಲ. ಇದೇ ಕಾರಣಕ್ಕೆ ಇಡೀ ರಾಜ್ಯಕ್ಕೆ ಹೋಲಿಸಿದಾಗ ಕರಾವಳಿ ಪ್ರದೇಶದಲ್ಲಿ ಅತೀ ಹೆಚ್ಚು ಮಳೆ ಕೊರತೆ ಇದೆ.
ಮುಂಗಾರು ದುರ್ಬಲಕ್ಕೆ ಏನು ಕಾರಣ?ಕೆಎಸ್ಎನ್ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ ಈ ಬಾರಿಯ ಮುಂಗಾರು ಆಗಮನದ ವೇಳೆ “ವಾಯು’ ಚಂಡಮಾರುತದಿಂದಾಗಿ ಇಲ್ಲಿನ ಮೋಡ ಮತ್ತು ತೇವಾಂಶ ಕೂಡ ಕಡಿಮೆಯಾಗಿದೆ. ಜೂ. 20ರ ಬಳಿಕ ಕರಾವಳಿಯಲ್ಲಿ ಉತ್ತಮ ಮಳೆ ನಿರೀಕ್ಷಿಸಬಹುದು. ಬಂಗಾಲಕೊಲ್ಲಿಯಲ್ಲಿ ನಿಮ್ನ ಒತ್ತಡ ಉಂಟಾಗಿದ್ದು,ಇದು ಮುಂಗಾರಿನ ಪ್ರಗತಿಗೆ ಪೂರಕವಾಗಿಯೇ ಇದೆ. ಇದರಿಂದಾಗಿ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.