Advertisement

ಅರ್ಧ ಶತಕ ಬಾರಿಸಿದರು “ಅಳಿದು ಉಳಿದವರು’

09:56 AM Feb 05, 2020 | Lakshmi GovindaRaj |

ನಾಯಕರಾಗಿ ನಟಿಸಿದ ಮೊದಲ ಚಿತ್ರ ಯಶಸ್ವಿ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡದ ಜೊತೆ ಸಂಭ್ರಮ ಹಂಚಿಕೊಳ್ಳಲೆಂದೇ ಸಂತೋಷ ಕೂಟ ಏರ್ಪಡಿಸಿದ್ದರು ಅಶುಬೆದ್ರ. “ಅಳಿದು ಉಳಿದವರು’ ಅವರ ನಿರ್ಮಾಣದಲ್ಲಿ ಮೂಡಿಬಂದ ಸಿನಿಮಾ. ಈ ಮೂಲಕ ಅವರು ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ.

Advertisement

ಮೊದಲ ಪ್ರಯತ್ನದಲ್ಲೇ ಅರ್ಧ ಸೆಂಚುರಿ ಬಾರಿಸಿರುವ ಅಸುಬೆದ್ರ ಅವರಿಗೆ ಸಹಜವಾಗಿಯೇ ಖುಷಿ ಇತ್ತು. ಹಾಗಾಗಿ, ಆ ಸಂತಸ ಹಂಚಿಕೊಳ್ಳುವುದರ ಜೊತೆಗೆ ಚಿತ್ರಕ್ಕಾಗಿ ದುಡಿದವರಿಗೆ ನೆನಪಿನ ಕಾಣಿಕೆ ಕೊಡುವ ಕಾರ್ಯಕ್ರಮ ಅದಾಗಿತ್ತು. ಅಂದು ನಿರ್ದೇಶಕ “ಸಿಂಪಲ್‌’ ಸುನಿ ಚಿತ್ರತಂಡದವರಿಗೆ ನೆನಪಿನ ಕಾಣಿಕೆ ವಿತರಿಸಿ, ಅಶುಬೆದ್ರ ಅವರ ಅಭಿನಯದ ಮೊದಲ ಚಿತ್ರ ಗೆಲುವು ಕೊಟ್ಟಿದೆ.

ಮುಂದಿನ ದಿನಗಳಲ್ಲೂ ಇದೇ ಯಶಸ್ಸು ಸಿಗಲಿ’ ಎಂದು ಶುಭಹಾರೈಸಿದರು. ಅಂದು ನಿರ್ದೇಶಕ ಅರವಿಂದ್‌ ಶಾಸ್ತ್ರೀ, ಸಂಗೀತ ನಿರ್ದೇಶ‌ಕ ಮಿಥುನ್‌ ಮುಕುಂದನ್‌, ಅಭಿಷೇಕ್‌, ಅರವಿಂದ್‌ ಮೆನನ್‌, ಸಂಭಾಷಣೆಗಾರ ಪ್ರವೀಣ್‌, ನಟ ಧರ್ಮಣ್ಣ ಇತರರು ನೆನಪಿನ ಕಾಣಿಕೆ ಸ್ವೀಕರಿಸಿ, ಸಂಭ್ರಮದಲ್ಲಿ ಮಿಂದೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next