Advertisement

ಹಾಲಪ್ಪ ವಿರುದ್ಧ ಕುತಂತ್ರ ನಡೆಸಿಲ್ಲ: ಬೇಳೂರು

06:55 AM Apr 01, 2018 | Team Udayavani |

ಶಿವಮೊಗ್ಗ: ಹರತಾಳು ಹಾಲಪ್ಪರ ವಿರುದ್ಧ ಯಾವುದೇ ಕುತಂತ್ರ ನಡೆಸಿಲ್ಲ. ಸಿಗಂದೂರು ಚೌಡೇಶ್ವರಿ ದೇವಿ ಮೇಲೆ ಪ್ರಮಾಣ ಮಾಡಿ ಹೇಳಲೂ ಸಿದ್ಧ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

Advertisement

ಶನಿವಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲಪ್ಪರಿಗೆ ಆಹ್ವಾನ ನೀಡುತ್ತೇನೆ, ಅವರು ಸಿಗಂದೂರು ದೇವಸ್ಥಾನಕ್ಕೆ ಬರಲಿ. ಇಬ್ಬರೂ ಆಣೆ ಮಾಡೋಣ. ನನ್ನ ತಪ್ಪಿದ್ದರೆ ಆ ತಾಯಿ ನನಗೆ ಶಿಕ್ಷೆ ಕೊಡಲಿ. ಅವರು ಯಾವ ದೇವರ ಮೇಲೆ ಪ್ರಮಾಣ ಮಾಡುತ್ತಾರೆ ಹೇಳಲಿ, ನಾನೂ ಸಿದ್ಧನಿದ್ದೇನೆ ಎಂದರು. 

ಕಾಗೋಡು ತಿಮ್ಮಪ್ಪ ತಮ್ಮ ಸೋದರ ಮಾವ ನಿಜ. ಆದರೆ ರಾಜಕೀಯಕ್ಕೆ ಬಂದರೆ ನಾವಿಬ್ಬರೂ ಬದ್ಧ ವೈರಿಗಳೇ. ಸಾಗರ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧೆಗೆ ಕಾಗೋಡು ತಿಮ್ಮಪ್ಪ ಬೇಕು. ಈ ಬಾರಿ ಅವರನ್ನು ಸೋಲಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next