Advertisement

Halady Junction: ಪಾದಚಾರಿಗೆ ಟ್ಯಾಂಕರ್‌ ಢಿಕ್ಕಿ; ಗಂಭೀರ

12:00 AM Nov 30, 2023 | Team Udayavani |

ಸಿದ್ದಾಪುರ: ಹಾಲಾಡಿ ಜಂಕ್ಷನ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ದಿನೇಶ್‌ ಅವರಿಗೆ ನ. 28ರಂದು ಅತೀ ವೇಗವಾಗಿ ಬಂದ ಟ್ಯಾಂಕರ್‌ ಢಿಕ್ಕಿ ಹೊಡೆದಿದೆ.

Advertisement

ಬಿದ್ಕಲ್‌ಕಟ್ಟೆಯಿಂದ ಚಾಲಕ ಜನಾರ್ದನ ಬೆಳ್ತಂಗಡಿ ಅವರು ಟ್ಯಾಂಕರ್‌ ಅನ್ನು ಚಲಾಯಿಸಿಕೊಂಡು ಬಂದು ಹಾಲಾಡಿ ಜಂಕ್ಷನ್‌ನಲ್ಲಿ ಶಂಕರನಾರಾಯಣದ ಕಡೆಗೆ ಯು ಟರ್ನ್ ತೆಗೆದುಕೊಂಡ ಪರಿಣಾಮ, ದಿನೇಶ್‌ ಅವರಿಗೆ ಡಿಕ್ಕಿ ಹೊಡೆದಿದೆ.

ಢಿಕ್ಕಿಯ ಪರಿಣಾಮ ದಿನೇಶ್‌ ಅವರು ಗಂಭೀರವಾಗಿ ಗಾಯಗೊಂಡರು. ಕೂಡಲೆ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಂಕರ ನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next