Advertisement

ಹಾಲಾಡಿ: ಅಕ್ರಮ ಗೋ ಸಾಗಟ; ಇಬ್ಬರು ಆರೋಪಿಗಳು ವಶಕ್ಕೆ

05:57 PM Jun 24, 2023 | Team Udayavani |

ಸಿದ್ದಾಪುರ: ಹಾಲಾಡಿ ಗ್ರಾಮದ ಕುದ್ರುಬೆಟ್ಟು ಎಂಬಲ್ಲಿ ಕುಚ್ಚಾಳ ಕಡೆಯಿಂದ ಕುಂದಾಪುರ ಕಡೆಗೆ ಟಾಟಾ ಕಂಪೆನಿಯ ಎ.ಎಸ್‌ ಮೆಗಾ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಕಟ ಮಾಡುತ್ತಿರುವ 3 ಗಂಡು ಕರುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

Advertisement

ಶಂಕರನಾರಾಯಣ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ನಾಸೀರ್‌ ಹುಸೇನ್‌ ಅವರು ಖಚಿತ ಮಾಹಿತಿಯ ಮೇರೆಗೆ ವಾಹನವನ್ನು ತಡೆದು ನಿಲ್ಲಿಸಿದ್ದಾಗ, ಅಕ್ರಮ ಗೋಸಾಟ ಬೆಳಕಿಗೆ ಬಂದಿದೆ. ಮೇಯಲು ಬಿಟ್ಟ 3 ಗಂಡು ಕರುಗಳನ್ನು ಆರೋಪಿಗಳು ಕದ್ದುತಂದಿರುವ ಸಾಧ್ಯತೆ ಇದೆ. ಆರೋಪಿಗಳಾದ ಜಪ್ತಿ ಗ್ರಾಮದ ಕರಿಕಲ್ಲು ಚಂದ್ರ ಶೆಟ್ಟಿ (55) ಮತ್ತು ಹಳ್ಳಾಡಿ ಗ್ರಾಮದ ಗುಡ್ಡೆಯಂಗಡಿ ಅಣ್ಣಪ್ಪ (65) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next