Advertisement

ಹಜ್‌ ಭವನಕ್ಕೆ ಬೇಕಾದ್ರೆ ಡಾ.ಕಲಾಂ ಹೆಸರಿಡಿ : ಬಿಎಸ್‌ವೈ ಸಲಹೆ 

03:42 PM Jun 24, 2018 | |

ಬೆಂಗಳೂರು : ಹಜ್‌ ಭವನಕ್ಕೆ ಟಿಪ್ಪು ಹೆಸರಿಡಲು ಮುಂದಾಗಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅನಗತ್ಯ ಗೊಂದಲಗಳನ್ನು ಹುಟ್ಟು ಹಾಕುತ್ತಿದ್ದು, ಈ ಬಗ್ಗೆ ನಮ್ಮ ಬಲವಾದ ವಿರೋಧವಿದೆ. ಬೇಕಾದರೆ  ಮಾಜಿ ರಾಷ್ಟ್ರಪತಿ ದಿವಂಗತ ಡಾ.ಎಪಿಜೆ ಅಬ್ದುಲ್‌ ಕಲಾಂ ಅವರ ಹೆಸರಿಡಲಿ ಎಂದರು. 

Advertisement

ಬಿಜೆಪಿ ನೇತೃತ್ವದ ಕೇಂದ್ರ ದ ಎನ್‌ಡಿಎ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಹೊತ್ತೆಗೆಯನ್ನು ಬಿಡಗುಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಈಡೇರಿಸುತ್ತಾರೆ ಎಂದು ಕಾತರರಾಗಿದ್ದರು. ಆದರೆ ಈಗ ಎಲ್ಲವೂ ಹುಸಿಯಾಗಿದೆ. ನಾನಿಗ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಕಾರ್ಯಕರ್ತರಿಗೂ ಹೇಳಿದ್ದೇನೆ ಕಾದು ನೋಡುತ್ತೇವೆ ಎಂದರು. 

ಕೇಂದ್ರ  ಸರ್ಕಾರ ಕರ್ನಾಟಕವನ್ನು ಹೊರಗಿಟ್ಟು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿ ಹಿಂದಿನ ಕಾಂಗ್ರೆಸ್‌ ಸರ್ಕರ ಸರಿಯಾದ ಕ್ರಮ ತೆಗೆದುಕೊಂಡಿರಲ್ಲಿಲ್ಲ. ಈಗಿನ ಸಮ್ಮಿಶ್ರ ಸರ್ಕಾರವೂ ಎಚ್ಚರ ವಹಿಸಿಲ್ಲ. ಅವರ ರಾಜ್ಯದ ವಿಚಾರಗಳನ್ನು ತಿಳಿಸಿಲು ಮತ್ತು ಪ್ರತಿನಿಧಿಯನ್ನು ನೇಮಿಸುವಲ್ಲಿ  ವಿಫ‌ಲವಾಗಿದ್ದಾರೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next