Advertisement

Hagaribommanahalli: ಆಕಳು ಮೇಯಿಸಲು ಹೋದ ಇಬ್ಬರು ಸಿಡಿಲಿಗೆ ಬಲಿ

03:31 PM Oct 06, 2024 | Team Udayavani |

ಹಗರಿಬೊಮ್ಮನಹಳ್ಳಿ: ತಾಲೂಕಿನ ದಶಮಾಪುರ ಗ್ರಾಮದ ಹೊರವಲಯದಲ್ಲಿ ಆಕಳು ಮೇಯಿಸಲು ಹೋದ ಇಬ್ಬರು ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಅ.6ರ ಭಾನುವಾರ ನಡೆದಿದೆ.

Advertisement

ದಶಮಾಪುರ ಗ್ರಾಮದ ಬಣಕಾರ ನಾರಪ್ಪ (58), ಬಣಕಾರ ಪ್ರಶಾಂತ (40) ಸಿಡಿಲು ಬಡಿದು ಸಾವಿಗೀಡಾದವರು.

ದಶಮಾಪುರ ಗ್ರಾಮದಿಂದ ಹಗರಿಬೊಮ್ಮನಹಳ್ಳಿಗೆ ಹೋಗುವ ಮುಖ್ಯ ರಸ್ತೆಯ ಬಳಿಯಿರುವ ಪ್ರೌಢಶಾಲೆ ಬಳಿಯ ತಮ್ಮ ಹೊಲದಲ್ಲಿ ಆಕಳು ಮೇಯಿಸುತ್ತಿದ್ದ ಸಂದರ್ಭ ಮಧ್ಯಾಹ್ನ ಸುಮಾರು 1 ಗಂಟೆ ಸಮಯಕ್ಕೆ ಬಡಿದ ಸಿಡಿಲಿಗೆ ಬಲಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಪಿಎಸೈ ಬಸವರಾಜ ಅಡವಿಬಾವಿ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next